ಬೆಳಗಾವಿ ಗಣೇಶ ಉತ್ಸವದ ಪ್ರಯುಕ್ತ ಪಥಸಂಚಲನ ನಡೆಸಿದ ಅಲೋಕ್ ಕುಮಾರ ಐಪಿಎಸ್

  • 15 Jan 2024 , 6:42 AM
  • Belagavi
  • 159

ಬೆಳಗಾವಿ :ಎಡಿಜಿಪಿ (ಕಾ&ಸು) ಬೆಂಗಳೂರು ಶ್ರೀ ಅಲೋಕ್ ಕುಮಾರ ಐಪಿಎಸ್ ರವರು ಶ್ರೀ ಗೌರಿ ಗಣೇಶ ಹಬ್ಬದ ಬಂದೋಬಸ್ತ್ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯವರೊಂದಿಗೆ ಬೆಳಗಾವಿಯ್ ಸೂಕ್ಷ್ಮ ಪ್ರದೇಶದಲ್ಲಿ ಪಥಸಂಚಲನ ಕೈಕೊಂಡು, ಚಾವಟ ಗಲ್ಲಿಯ ಶ್ರೀ ಗಣೇಶ ಮಂಡಳಿಯವರು ಹಾಗೂ ಶಾಸಕರೊಂದಿಗೆ ಚರ್ಚೆ ನಡೆಸಿ ಸರ್ಕಾರದ, ಮಾನ್ಯ ನ್ಯಾಯಾಲಯ ಹಾಗೂ ಇಲಾಖೆಯ ಆದೇಶವನ್ನು ಪಾಲಿಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತಿಳಿಸಿದರು.

ದರಬಾರ ಗಲ್ಲಿ ಮಸೀದಿ ಮುಂದೆ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತಿಳಿಸಿದರು.

ಎಲ್ಲ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಶ್ರೀ ಗಣೇಶ ಉತ್ಸವ ಮುಕ್ತಾಯಗೊಳ್ಳುವವರೆಗೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ, ಕರ್ತವ್ಯದ ಬಗ್ಗೆ ಸೂಕ್ತ ಸಲಹೆ ಸೂಚನೆ ನೀಡಿದರು.

Read All News