ಜಿಲ್ಲೆಯಲ್ಲಿ ಶೃದ್ಧಾ ಭಕ್ತಿಯಿಂದ ಆಚರಿಸಿದ ಬಕ್ರೀದ್

  • Shivaraj Bandigi
  • 15 Jan 2024 , 1:47 AM
  • Belagavi
  • 260

ಬೆಳಗಾವಿ: ಬೆಳಗಾವಿ ಮಹಾನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಮುಸ್ಲಿಂ ಬಾಂಧವರು ತ್ಯಾಗ- ಬಲಿದಾನಗಳ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಗುರುವಾರ ಶ್ರದ್ಧೆ, ಭಕ್ತಿಗಳಿಂದ ಆಚರಿಸಿದರು.

ವಿವಿಧ ಈದ್ಗಾ ಮೈದಾನಗಳಲ್ಲಿ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಪರಸ್ಪರ ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡರು.

ಎಲ್ಲ ಮಸೀದಿಗಳಲ್ಲಿ ಇಂದು ಬೆಳಗ್ಗೆ ವಿಶೇಷ ಪ್ರಾರ್ಥನೆಗಳು ಜರುಗಿದವು. ದೇವರ ಮಹಿಮೆಯನ್ನು ಆಲಿಸಿದರು. ಜಾಗತಿಕ ಶಾಂತಿ- ಸಾಮರಸ್ಯವನ್ನು ದೇವರಲ್ಲಿ ಬೇಡಿದರು. ಧರ್ಮ ಗುರುಗಳು ಪ್ರವಚನ ನೀಡಿದರು.

ಆದರ್ಶಗಳ ಪಾಲನೆಗೆ ಕರೆ ನೀಡಿದರು. ಹಬ್ಬದ ನಿಮಿತ್ತ ವಿಶೇಷ ತಿಂಡಿ- ತಿನಿಸು ಹಾಗೂ ಭೋಜನದ ವ್ಯವಸ್ಥೆ ಮಾಡಿದ್ದರು. ಮಸೀದಿ, ದರ್ಗಾಗಳ ಅಕ್ಕಪಕ್ಕ ಜಾತ್ರೆಯ ಕಳೆ ಇತ್ತು.

ಸಾಮೂಹಿಕ ಪ್ರಾರ್ಥನೆಯಲ್ಲಿ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಪಾಲ್ಗೊಂಡಿದ್ದರು.

Read All News