ಬೆಳಗಾವಿ ಬಿಜೆಪಿ ಕಾರ್ಯಕಾರಿಣಿ ಸಭೆ: ಕಾಂಗ್ರೆಸ ಕಿವಿ ಹಿಂಡಿದ ಡಿ.ಕೆ. ಅರುಣ

  • krishna shinde
  • 5 Feb 2024 , 3:57 PM
  • Belagavi
  • 365

ಬೆಳಗಾವಿ:ಇಂದು ಬೆಳಗಾವಿ ಮಹಾನಗರದ ಮಹಾವೀರ ಭವನದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಿತು. ಈ ಸಭೆಯಲ್ಲಿ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

ಪ್ರಮುಖ ಅಂಶಗಳು:

ಅಡ್ವಾಣಿಗೆ ಭಾರತ ರತ್ನ ಗೌರವ:50 ವರ್ಷಗಳಿಂದ ರಥ ಯಾತ್ರೆ ಮೂಲಕ ಜನರ ಮನಗೆದ್ದ  ಎಲ್ ಕೆ ಅಡ್ವಾಣಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ ಡಿ.ಕೆ. ಅರುಣ ಧನ್ಯವಾದ ತಿಳಿಸಿದ್ದಾರೆ.
ಮೋದಿ ಸರ್ಕಾರದ ಸಾಧನೆಗಳ ಗುಣಗಾನ:ಡಿ.ಕೆ. ಅರುಣ ಪ್ರಧಾನಿ ಮೋದಿಯವರ ಕಾರ್ಯಗಳನ್ನು ಹೊಗಳಿದ್ದಾರೆ.
ಬ್ಯಾಂಕಿಂಗ್ ಸೆಕ್ಟರ್‌ಗೆ ಉತ್ತೇಜನ:ಡಿ.ಕೆ. ಅರುಣ, ಪ್ರಧಾನಿ ಮೋದಿ ಬ್ಯಾಂಕಿಂಗ್ ಸೆಕ್ಟರ್‌ಗೆ ಹೊಸ ಉತ್ತೇಜನ ನೀಡಿದ್ದಾರೆ ಎಂದು ಹೇಳಿದ್ದಾರೆ.
2027ರಲ್ಲಿ ಭಾರತ 3ನೇ ಸ್ಥಾನದಲ್ಲಿ:ಡಿ.ಕೆ. ಅರುಣ, 2027ರಲ್ಲಿ ಭಾರತ ಪ್ರಪಂಚದಲ್ಲೇ ಆರ್ಥಿಕವಾಗಿ 3 ನಂಬರ ಸ್ಥಾನಕ್ಕೇರುತ್ತದೆ ಎಂದು ಹೇಳಿದ್ದಾರೆ.
ಕೃಷಿಕರಿಗೆ ಮಹತ್ವ:2014ರಿಂದ ಕೃಷಿಕರಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದು ಡಿ.ಕೆ. ಅರುಣ ಹೇಳಿದ್ದಾರೆ.
ಪ್ರಧಾನಿ ಮೋದಿಯವರ GYAN ಮಂತ್ರ:ಡಿ.ಕೆ. ಅರುಣ, ಪ್ರಧಾನಿ ಮೋದಿಯವರ GYAN ಮಂತ್ರವನ್ನು ವಿವರಿಸಿದ್ದಾರೆ:
    G - ಗರೀಬ ಕಲ್ಯಾಣ
    Y - ಯುವಕರು
    A - ಅನ್ನದಾತ (ರೈತ)
    N - ನಾರಿ ಶಕ್ತಿ
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಡಿ.ಕೆ. ಅರುಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 5 ಯೋಜನೆಗಳನ್ನು ಹಿಡಿದು ಕಾಂಗ್ರೆಸ್ ಬಡಿತಾಡುತ್ತಿದೆ ಎಂದು ಟೀಕಿಸಿದ್ದಾರೆ.
ಡಿಕೆ ಸುರೇಶ್ ವಿರುದ್ಧ ವಾಗ್ದಾಳಿ:ಡಿ.ಕೆ. ಅರುಣ ಡಿಕೆ ಸುರೇಶ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಸೋಶಿಯಲ್ ಮೀಡಿಯಾಗಳ ಮಹತ್ವ:ಡಿ.ಕೆ. ಅರುಣ ಸೋಶಿಯಲ್ ಮೀಡಿಯಾಗಳ ಮಹತ್ವ ತಿಳಿಸಿದ್ದು, ಪ್ರತಿಯೊಬ್ಬರೂ ನಮೋ ಆಪ್ ಬಳಸಬೇಕೆಂದು ಒತ್ತಾಯಿಸಿದ್ದಾರೆ.

Read All News