ಬೆಳಗಾವಿ :ಮೀಸಲಾತಿ ಬಗ್ಗೆ ಐತಿಹಾಸಿಕ ಘೋಷಣೆಯನ್ನು ಬೊಮ್ಮಾಯಿ ತೆಗೆದುಕೊಂಡಿದ್ದಾರೆ ಎಂದು ಎಂ ಬಿ ಜಿರಲಿ ಹೇಳಿದ್ದಾರೆ,ಡಾ ಬಿ ಆರ್ ಅಂಬೇಡ್ಕರವರನ್ನು ನೆನೆದು ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸಿದ ಜಿರಲಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ,ಲಂಬಾಣಿ ಮತ್ತು ಇತರ ಜನಾಂಗಗಳಿಗೆ ಒಳಮೀಸಲಾತಿ ನಿರ್ಣಯ ಮಾಡಿದ್ದು ಬೊಮ್ಮಾಯಿ ಸರ್ಕಾರ ಎಂದು ಜಿರಲಿ ಹೇಳಿದರು.
ಯಾವುದೇ ಸಮಾಜಕ್ಕೆ ಅನ್ಯಾಯವಾಗದಂತೆ ಬೊಮ್ಮಾಯಿ ಸರ್ಕಾರ ರಚಿಸಿದ್ದಾರೆ ಮತ್ತು ಭಾರತ ದೇಶ ಅನೇಕ ಭಾಷೆ ಮತ್ತು ಭಾವನೆ ಹೊಂದಿದ ದೇಶ ಎಂದು ಹೇಳಿದ್ದಾರೆ.
ಡಾ. ಬಾಬಾ ಸಾಹೇಬ ಅಂಬೇಡ್ಕರವರು ದೇಶಕಂಡ ಅತ್ಯುನ್ನತ ದೇಶಭಕ್ತ ಎಂದು ಹೇಳಿದ್ದಾರೆ.
ಡಿ ಕೆ ಶಿವಕುಮಾರ ವಿರುದ್ಧ ಗುಡಿಗಿದ ಜಿರಲಿ dkc ತಮ್ಮ ಡೆಪಾಸಿಟ್ ಜಪ್ತ ಮಾಡ್ಕೋತಾರೆ ಎಂದು ಹೇಳಿದ್ದಾರೆ,ಕಾಂಗ್ರೆಸ ಮೂಲೆ ಗುಂಪುವಾಗಿದೆ ಎಂದು ಕಾಂಗ್ರೆಸನ ಕಾಲೆಳೆದಿದ್ದಾರೆ.
ಬೆಳಗಾವಿ (ಗ್ರಾ) ಜಿಲ್ಲಾ ಬಿಜೆಪಿ ಘಟಕದಿಂದ ಪತ್ರಿಕಾಗೋಷ್ಠಿ ನಡೆದಿದ್ದು ಜಿಲ್ಲಾ ಅಧ್ಯಕ್ಷರಾದ ಸಂಜಯ ಪಾಟೀಲ ,ಬಿಜೆಪಿಯ ರಾಜ್ಯ ವಕ್ತಾರರಾದ ಎಮ್.ಬಿ.ಝೀರಲಿ ,ಎಫ್ ಎಸ್ ಸಿದ್ದಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು.