ಬೈಲಹೊಂಗಲ : ರವಿವಾರದಿಂದ ನಾರೆಯರ ಉಚಿತ ಪ್ರಯಾಣಕ್ಕಾಗಿ ಶೃಂಗಾರಗೊಂಡ ಬಸ್ ನಿಲ್ದಾಣಗಳು. ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಕೂಡಾ ಮದುವಣಗಿತ್ತಿಯಂತೆ ತಯಾರಯಾಗಿ ನಿಂತಿದೆ.
ನಾಳೆ ಬೆಳಿಗ್ಗೆ 11 ಕ್ಕೆ ಸಿಎಂ ಸಿದ್ರಾಮಯ್ಯ ಶಕ್ತಿ ಯೋಜನೆಗೆ ಚಾಲನೆ ನೀಡುತ್ತಿದ್ದಂತೆ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮಹತ್ತರ ಯೋಜನೆಗೆ ಚಾಲನೆ ದೊರೆಯುವ ಹಿನ್ನೆಲೆಯಲ್ಲಿ ಪಟ್ಟಣದ ವೀರರಾಣಿ ಮಲ್ಲಮ್ಮ ಬಸ್ ನಿಲ್ದಾಣವನ್ನು ಕೂಡಾ ಅಲಂಕೃತ ಮಾಡಲಾಗಿದೆ.