ಬೆಳಗಾವಿ : ಮಹಾನಗರ ಪಾಲಿಕೆ ಉನ್ನತ ಸ್ಥಾನದಲ್ಲಿದೆ. ಇದರ ನಡುವೆ ರಾಜಕೀಯ ಸ್ವಹಿತಾಸಕ್ತಿಯಿಂದ ಮೇಯರ್ ವಿರುದ್ಧ ದೂರು ಕೊಟ್ಟಿರುವುದನ್ನು ಖಂಡಿಸಿ ಮಂಗಳವಾರ ಪಾಲಿಕೆ ಮಾಜಿ ಸದಸ್ಯರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲತೀಫಖಾನ್ ಪಠಾಣ, ಕಳೆದ 2020ರಿಂದಲೂ ಪಾಲಿಕೆಯನ್ನು ಸರಕಾರ ಒಂದಿಲ್ಲ ಒಂದು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಈಗ ಮತ್ತೆ ಸೂಪರ್ ಸೀಡ್ ಮಾಡುವ ಹುನ್ನಾರ ನಡೆಸಿದ್ದು ಖಂಡನೀಯ ಎಂದರು.