ಸರಕಾರಿ ಅಧಿಕಾರಿಯ ಸಾವಿನ ಸುತ್ತ ಅನುಮಾನದ ಹುತ್ತ

  • Shivaraj Bandigi
  • 14 Jan 2024 , 11:04 PM
  • Belagavi
  • 320

ಬೆಳಗಾವಿ : ಬೆಳಗಾವಿಯ ಡಿಸಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಗ್ರೇಡ್‌ 2 ಅಧಿಕಾರಿ ಅಶೋಕ್‌ ಮಣ್ಣಿಕೇರಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ಅವರ ಪೋಷಕರು ಆರೋಪಿಸಿದ್ದಾರೆ.

ಕಾಳಿ ಅಂಬ್ರಾದಲ್ಲಿನ ಅಪರ್ಟ್‌ಮೆಂಟ್‌ ಅಶೋಕ್‌ ಮಣ್ಣಿಕೇರಿ ವಾಸವಿದ್ರು ಎನ್ನಲಾಗಿದೆ. ಇದೇ ವೇಳೆ ಅಶೋಕ್‌ ಮಣ್ಣಿಕೇರಿ ಅವರನ್ನು ಆಕೆಯ ಪತ್ನಿ ಆಸ್ಪತ್ರೆಗೆ ದಾಖಲು ಮಾಡಿದ್ದರು ಎನ್ನಲಾಗಿದೆ. ಇನ್ನೂ ಅಶೋಕ್‌ ಮಣ್ಣಿಕೇರಿ ಸಾವಿನಲ್ಲಿ ನಮಗೆ ಅನುಮಾನ ಕಂಡು ಬಂದಿದ್ದು, ಅವರಿಗೆ ಹೃದಯಘಾತವಾಗಿದೆ ಅಂತ ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಬೇಕೆಂದು ಅವರ ಸಂಬಂಧಿಕರಾದ ಗಿರಿಜಾ ಮಣ್ಣೀಕೆರಿ ಆಗ್ರಹಿಸಿದ್ದಾರೆ.

ಇನ್ನೂ ಆಸ್ಪತ್ರೆ ಅವರಣದಲ್ಲಿ ಅಶೋಕ್‌ ಮಣ್ಣಿಕೇರಿ ಅವರ ಸಂಬಂಧಿಕರು ಭೂಮಿ ಹಾಗೂ ಆಕೆಯ ಸಹೋಧರ ಮೇಲೆ ಹಲ್ಲೆ ನಡೆಸಿದ್ದ ಘಟನೆ ಕೂಡ ನಡೆಯಿತು.

Read All News