ಬೆಳಗಾವಿ : ಇಲ್ಲಿನ ಸದಾಶಿವ ನಗರದ ಸಿ.ಎಸ್.ಸಿ ಅಕಾಡೆಮಿಯ ವತಿಯಿಂದ BISE ಮತ್ತು ತಾಂತ್ರಿಕ, ಆರ್ಥಿಕ ಸಾಕ್ಷರತೆ ಒದಗಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಗೆ ಪರಿಚಯಿಸುತ್ತಿರುವ ನೂತನ ಮೊಬೈಲ್ ವ್ಯಾನ್ ಗೆ ಇಂದು ಚಾಲನೆ ನೀಡಲಾಯಿತು.
ಹುಣಸಿಕಟ್ಟಿ ರುದ್ರಸ್ವಾಮಿ ಮಠದ ಶ್ರೀ ಚನ್ನಬಸವ ದೇವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಮೇಯರ್ ಶ್ರೀಮತಿ ಸವಿತಾ ಕಾಂಬ್ಳೆ, ಶಾರದಾಂಬಿಕಾ ಐಟಿಐ ಕಾಲೇಜಿನ ಪ್ರಾಂಶುಪಾಲ ನಾನಗೌಡ ಪೊಲೀಸಪಾಟೀಲ್, ಸಿ.ಎಸ್.ಸಿ ಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ್ ಕರೆರುದ್ರಣ್ಣನವರ್ ಉಪಸ್ಥಿತರಿದ್ದರು.