ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಗಡಿ ಗ್ರಾಮಗಳಾದ ಸಂಬರಗಿ, ಕಲೂತಿ,ನಾಗನೂರ ಗ್ರಾಮ ಸೇರಿ ಹಲವು ಗ್ರಾಮಗಳಲ್ಲಿ ಮಳೆ ಅವಾಂತರವನ್ನೇ ಸೃಷ್ಟಿಸಿದೆ.
ಮಳೆಯಿಂದ ನೀರು ನಿಂತು ಅಪಾರ ಪ್ರಮಾಣದ ಬೆಳೆ ಹಾಣಿಯಾಗಿದೆ ಹಾಗು ಉದ್ದಿನಬೇಳೆ ಕೈಗೆ ನಿಲುಕದೆ ಸರ್ವನಾಶವಾಗಿ ರೈತರು ಕಂಗಾಲಾಗಿದ್ದಾರೆ .
ಇತ್ತ ಚುನಾಯಿತ ಪ್ರತಿನಿಧಿಗಳ ಮೌನ ಒಂದೆಡೆಯಾದರೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಇದುವರೆಗೂ ಪರಿಹಾರ ದೊರೆತಿಲ್ಲ ಎಂದು ರೈತರು ಗೋಳಾಡುತ್ತಿದ್ದಾರೆ .
ಬರಪೀಡಿತ ಭಾಗದಲ್ಲಿ ಕಷ್ಟ ಪಟ್ಟು ಬೇಳೆದ ಬೆಳೆ ರಾತ್ರಿ ಸುರಿದ ಮಳೆಗೆ ಸರ್ವನಾಶವಾಗಿದೆ, ಇನ್ನಾದರೂ ನಮ್ಮ್ ಜನ್ ಪ್ರತಿ ನಿದಿಗಳು ಎಚ್ಚೆತ್ತಕೊಳ್ಳಬೇಕು .