ಶಕ್ತಿ ಯೋಜನೆಯ ಎಫೆಕ್ಟ್ ಹೈರಾಣಾದ ವಿದ್ಯಾರ್ಥಿಗಳ ಪಾಡು

  • Krishna Shinde
  • 14 Jan 2024 , 10:44 PM
  • Bengaluru
  • 347

ಅಥಣಿ : ಕಾಂಗ್ರೆಸ್ ಸರಕಾರ ನೀಡಿರುವ ಹಲವು ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಈಗಾಗಲೇ ಸುದ್ದಿಯಾಗಿದ್ದು ಬಸ್ಸುಗಳಲ್ಲಿ ನಿಲ್ಲಲು ಕೂಡಲು ಜಾಗವಿಲ್ಲದಂತಾಗಿದೆ.

ಇಂಥಹದೇ ಉಧಾಹರಣೆ ಅಥಣಿಯಲ್ಲಿ ಕೂಡಾ ನಡೆದಿದ್ದು ಅಥಣಿಯಲ್ಲಿ ಪ್ರಯಾಣಿಕರು ಬಸ್ಸುಗಳ ಬಾಗಿಲಿಗೆ ಜೋತು ಬಿದ್ದು ಪ್ರಯಾಣಿಸುತ್ತಿದ್ದಾರೆ.

ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಜಾಗ ಸಿಗದೆ ಬಸ್ಸಿನ ಬಾಗಲಿಗೆ ಜೋತು ಬಿದ್ದು ತೆರಳುತ್ತಿರುವ ದೃಶ ಕಂಡುಬರುತ್ತಿದೆ.

ಶಕ್ತಿ ಯೋಜನೆ ಎಫೆಕ್ಟನಿಂದ ಮಹಿಳೆಯರಿಗೆ ಪ್ರಿ ಪ್ರಯಾಣ ದೊರೆತ್ತಿದೆ ಈ ಹಿನ್ನಲೆ ಬಹುತೇಕ ಮಹಿಳೆಯರಿಂದಲೇ ಬಸ್ ಫುಲ್ ಆಗಿದೆ ಮತ್ತು ದಿನನಿತ್ಯ ಶಾಲಾ ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ ಇದು ಸಂಕಟದಂತೆ ಎದುರಾಗಿದೆ.

ಹೆಚ್ಚುವರಿ ಬಸ್ ಗಳ ನಿಯೋಜನೆ ಮಾಡಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕಾಗಿ ಲೋಕಲವಿವ ಸುದ್ದಿವಾಹಿನಿ ಮೂಲಕ ಸರ್ಕಾರಕ್ಕೆ ಕೋರಲಾಗಿದೆ.

Read All News