ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ತಕ್ಷಣವೇ ನೀರು ಬಿಡಿಸಬೇಕೆಂದು : ರೈತ ಮುಖಂಡ ಮಹಾದೇವ ಮಡಿವಾಳ

  • Shivaraj Bandigi
  • 14 Jan 2024 , 9:52 PM
  • Belagavi
  • 160

ಅಥಣಿ  : ತಾಲೂಕಿನ ಜೀವನದಿಯಾದ ಕೃಷ್ಣಾ ನದಿ ಬತ್ತಿ ಹೋಗಿದ್ದರಿಂದ ದಿನೇ ದಿನೇ ನೀರಿನ ಕೊರತೆ ಉಂಟಾಗುತ್ತಿದೆ ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ಇತ್ತ ಕಡೆ ಸ್ವಲ್ಪ ಗಮನಹರಿಸಿ ಶೀಘ್ರವೇ ಕೃಷ್ಣಾ ನದಿಗೆ ಎರಡು ಟಿಎಂಸಿ ನೀರು ಬಿಡಿಸಬೇಕೆಂದು ಮನವಿ ಮಾಡಿದರು.

ಈ ಕೃಷ್ಣ ನದಿಯಿಂದ ಉತ್ತರ ಭಾಗದ ಸುಮಾರು ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆ ತೊಂದರೆಯಾಗುತ್ತಿದೆ ನೂರಾರು ಹೆಕ್ಟರ್ ನಷ್ಟು  ಕಬ್ಬು ಈಗಾಗಲೇ ನಾಶವಾಗಿದೆ ಧನಕರಿಗಳಿಗೆ ನೀರಿಲ್ಲದೆ ದಿನಕ್ಕೆ ಪರದಾಡುವಂತಾಗಿದೆ ಈ ತೊಂದರೆಯನ್ನು ಅರಿತು ತಾಲೂಕಿಗೆ ಕುಡಿಯುವ ನೀರನ್ನು ಪೂರೈಸಬೇಕೆಂದು ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷರಾದ ಮಹದೇವ್ ಮಡಿವಾಳ ಹೇಳಿದರು.

Read All News