ಅಥಣಿ :ತಾಲೂಕಿನ ದರೂರ್ ಗ್ರಾಮದಲ್ಲಿ ಇಂದು ವಿವಿಧ ದೇವಾಲಯಗಳ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಲಕ್ಷ್ಮಣ್ ಸವದಿ ಅವರು ಹಲವಾರು ದಿನಗಳ ಬೇಡಿಕೆಯಾಗಿದ್ದ ಸುಮಾರು 8 ಸಮುದಾಯ ಭವನಗಳನ್ನು ತಲಾ 4 ಲಕ್ಷ ರೂಗಳ ಅನುದಾನದಲ್ಲಿ 8 ದೇವಸ್ಥಾನಗಳನ್ನು ಭೂಮಿ ಪೂಜೆ ಹಮ್ಮಿಕೊಂಡಿದ್ದು ಇದರಿಂದ ಸ್ಥಳೀಯ ನಿವಾಸಿಗಳಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುತ್ತದೆ ಸವದಿ ಎಂದರು.
ಇದೇ ವೇಳೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಅಣ್ಣಾಸಾಬ ನಾಯಕ ಸುರೇಶ್ ಮಾಯಣ್ಣವರ್ ಮಹೇಶ್ ದವಳೇಶ್ವರ್ ವಿಠ್ಠಲ್ ಚೌಗುಲಾ ಹಾಗೂ ದರೂರ್ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು