ಬೈಲಹೊಂಗಲ : ಪಟ್ಟಣದ ರೊಟರಿ ಕ್ಲಬ್ ವತಿಯಿಂದ ಸಮೀಪದ ಮರಕುಂಬಿ ಗ್ರಾಮದಲ್ಲಿ ದಿ. 24 ರಂದು ಉಚಿತ ಆರೋಗ್ಯ ತಪಾಸನಾ ಶಿಬಿರ ಆಯೋಜಿಸಲಾಗಿದ್ದು, ಅಂದು ಮುಂಜಾನೆ 8-30 ರಿಂದ ಮಧ್ಯಾಹ್ನ 12 ರವರಗೆ ಮರಕುಂಬಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಖ್ಯಾತ ಎಲುವು ಕೀಲು ತಜ್ಞ ಡಾ. ಸಾಗರ ಕುಲಕರ್ಣಿ, ಸ್ರ್ತೀ ರೋಗ ತಜ್ಞೆ ಡಾ. ಅಪೂರ್ವ ಬೆಳಗಾಂವಕರ, ಚಿಕ್ಕ ಮಕ್ಕಳತಜ್ಞ ಡಾ. ಮಡಿವಾಳೇಶ ಮಸ್ತಮನವರ ಇವರಿಂದ ಉಚಿತ ತಪಾಸನಾ ಶಿಬಿರ ನಡೆಯಲಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.