ಬೆಳಗಾವಿ
ಪುಂಡ ಎಂಇಎಸ್ ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ಮೆರೆದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಉದ್ಯಮಿ ಶ್ರೀಕಾಂತ್ ದೇಸಾಯಿ ಕಾರ್ಖಾನೆ ಮೇಲೆ ಜೈ ಮಹಾರಾಷ್ಟ್ರ ಬರೆದಿದ್ದ ಎಂಇಎಸ್ ಶುಂಭ ಸೇಳ್ಕೆ ಕನ್ನಡಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ, ಬೆಳಗಾವಿಯಲ್ಲಿ ನಡೆದ ಕುಸ್ತಿ ಅಖಾಡದಲ್ಲಿ ಜೈ ಮಹಾರಾಷ್ಟ್ರ ಅಂದಿದ್ದ ಕುಸ್ತಿ ಪಟುವಿಗೆ ವೇಳೆ ಬುದ್ದಿವಾದ ಹೇಳಿ ಜೈ ಕರ್ನಾಟಕ ಹೇಳುವಂತೆ ಶ್ರೀಕಾಂತ್ ಸಲಹೆ ನೀಡಿದ್ದರು.
ಇದನ್ನ ವಿರೋಧಿಸಿ ಉದ್ಯಮಿ ಕಾರ್ಖಾನೆ ಮೇಲೆ ದಾಳಿ ನಡೆಸಿ ಪ್ಲೆಕ್ಸ್ ಹರಿದು, ಜೈ ಮಹಾರಾಷ್ಟ್ರ ಗೋಡೆ ಬರಹ ಬರೆದಿದ್ದ ಪುಂಡ ಎಂಇಎಸ್ ಮುಖಂಡು, ಇತ್ತ ಭಾಷಾ ವೈಷಮ್ಯ ಭಿತ್ತುವ ನಿಟ್ಟಿನಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಶುಭಂ ಸೇಳ್ಕೆ ಹೇಳಿಕೆ ನೀಡಿದ್ದ. ಶುಭಂ ಸೇಳ್ಕೆ ಸೇರಿ ಮೂವರನ್ನು ಬಂಧಿಸುವಂತೆ ಡಿಸಿಪಿ ರೋಹನ್ ಜಗದೀಶ್ ಮಾಳಮಾರುತಿ ಪೊಲೀಸರಿಗೆ ಸೂಚನೆ ನೀಡಿದ ಮೇಲೆ ಮೂವರನ್ನು ಬಂಧಿಸಿಲಾಗಿದೆ.