ಬೆಳಗಾವಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಪ್ರವೀಣ ಹಿರೇಮಠ ಬೆಳಗಾವಿ ಉತ್ತರ ಕ್ಷೇತ್ರದ ಬಸವನ ಕುಡುಚಿಯಲ್ಲಿ ಕಾಲ್ನಡಿಗೆಯಲ್ಲಿ ಮನೆ ಮನೆ ತೆರೆಳಿ ಕೆಆರಪಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಿ ಮತದಾರರಲ್ಲಿ ಮತ ಚಲಾಯಿಸುವಂತೆ ಕೋರಿದ್ದಾರೆ.
ಪ್ರಚಾರದ ವೇಳೆ ನಿವಾಸಿಗಳ ಅಹುವಾಲು ಸ್ವೀಕರಿಸಿದ ಪ್ರವೀಣ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಬಸವನ ಕುಡುಚಿ ಜನತೆ ನೀಡುತ್ತಿರುವ ಪ್ರೀತಿ ಹಾಗು ಬೆಂಬಲಕೆ ಚೀರುರುಣಿ ಎಂದು ಹೇಳಿದ್ದಾರೆ.
ಗಾಲಿ ಜನಾರ್ಧನ ರೆಡ್ಡಿ ಅವರ ಪಕ್ಷಕ್ಕೆ ಬಸವನ ಕುಡುಚಿ ಜನತೆಯು ಬಹು ಪರಾಗ ಹಾಕಿದ್ದು ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪಕ್ಷದ ಪರ ನಿಲ್ಲುತೇವೆ ಎಂದು ಮತದಾರರು ಹೇಳಿದ್ದಾರೆ ಎಂದು ಹಿರೇಮಠ ಹೇಳಿದ್ದಾರೆ.
ತನ್ನ ಧರ್ಮ ಪತ್ನಿ ಜ್ಯೋತಿ ಹಿರೇಮಠ ಹಾಗು ಕಾರ್ಯಕರ್ತರೊಂದಿಗೆ ಬಸವನ ಕುಡುಚಿಗೆ ತೆರೆಳಿದ ಪ್ರವೀಣ ಪ್ರತಿ ಮನೆಗೆ ತೆರೆಳಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ ಹಾಗು ಪಕ್ಷದ ಮುಂದಿನ ಯೋಜನೆಗಳ ಬಗ್ಗೆ ಮತದಾರರಲ್ಲಿ ತಿಳಿಹೇಳಿದ್ದಾರೆ.
ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎಂದು ಹೇಳುವ ಮೂಲಕ ಮನೆ ಮನೆಗೆ ತೆರಳಿದ ಪ್ರವೀಣ್ ಪಕ್ಷದ ಸಂಘಟನೆ ಮತ್ತಷ್ಟು ಗಟ್ಟಿಗೊಳಿಸುತಿದ್ದಾರೆ ಎಂದು ತಿಳಿಸಿದ್ದಾರೆ.
ಬಸವನ ಕುಡುಚಿಯ ಗಲ್ಲಿ ಗಲ್ಲಿಯಲ್ಲಿ ತೆರೆಳಿ ಪ್ರಚಾರ್ ನಡೆಸಿದ ಪ್ರವೀಣ ಜನ ಬೆಂಬಲ ಮತ್ತಷ್ಟು ಗಟ್ಟಿಗೊಳಿಸಿಕೊಂಡು ಮುನ್ನುಗ್ಗುತಿದ್ದಾರೆ ಎಂದು ಹೇಳಿದ್ದಾರೆ.
ಬೆಳಗಾವಿಯ ಬಸವನ ಕುಡುಚಿಯಲ್ಲಿ @krppofficial ಪಕ್ಷಕ್ಕೆ ಸಂಪೂರ್ಣ್ ಬೆಂಬಲ ನೀಡಿ ನಿವಾಸಿಗಳಲ್ಲಿ ಮತಯಾಚನೆ ಮಾಡಿದ ಕ್ಷಣ pic.twitter.com/AVAR2VSRrK
— Praveen Hiremath (@praveen_oficial) May 3, 2023