ಬೆಳಗಾವಿಯಲ್ಲಿ ಇಂದು ಆರಂಭವಾದ ಹತ್ತು ದಿನಗಳ ಅಧಿವೇಶನ ದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ಹಲವು ಬೇಡಿಕೆಗಳನ್ನು ಮಂಡಿಸಿ ಧರಣಿ ನಡೆಸುತ್ತಿರುವ
ರೈತರ ಅಹವಾಲುಗಳನ್ನು ಆಲೈಸಿ ಬೇಡಿಕೆಗಳನ್ನು ಪರಿಶೀಲಿಸುವ ಬಗ್ಗೆ ಭರವಸೆ ನೀಡಿದ್ದಲ್ಲದೆ ಧರಣಿ ಹಿಂಪಡೆಯುವಂತೆ ವಿನಂತಿಸಿದರು.
ಪೊಲೀಸ್ ಆಯುಕ್ತ ಶ್ರೀ ಬೋರಲಿಂಗಯ್ಯ ಸೇರಿದಂತೆ, ಹಿರಿಯ ಪೊಲೀಸ್ ಅಧಿಕಾರಿಗಳೂ ಉಪಸ್ತಿತರಿದ್ದರು.