ಬೆಳಗಾವಿ :ರಾಷ್ಟ್ರೀಯ ಸಂತ ತಮ್ಮ ಪ್ರವಚನದ ಮೂಲಕ ಜನಮಾನಸದಲ್ಲಿ ಅಜರಾಮರರಾಗಿ ಉಳಿದಿದ್ದರು ವಿಜಯಪುರದಿಂದ ಇಡಿ ದೇಶದ ತುಂಬಾ ಖ್ಯಾತರಾಗಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಇನ್ನಿಲ್ಲ ಎಂಬ ಸುದ್ದಿ ಕೇಳಿ ಅತೀವ ದುಃಖ ವಾಗುತ್ತಿದೆ,ಇ ವಿಷಯವನ್ನು ಮನಸ್ಸು ಒಪ್ಪುತ್ತಿಲ್ಲ , ನಿನ್ನೆ ಬೆಳಿಗ್ಗೆಯಷ್ಟೆ ಹುಕ್ಕೇರಿ ಹಿರೇಮಠದಲ್ಲಿ ಮಹಾ ಮೃತ್ಯುಂಜಯ ಸ್ವಾಮಿಯ ಜಪ ಹಾಗೂ ಹೋಮ ಮಾಡಿ ನಡೆದಾಡುವ ದೇವರನ್ನು ಶತಾಯುಷಿಗಳಾಗಿ ಮಾಡು ಎಂದು ಪಾರ್ಥಿಸಿದ್ದೆವು.