ಬೆಳಗಾವಿ : ತಹಶೀಲ್ದಾರ್ ಅಶೋಕ್ ಮಣ್ಣೀಕೇರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವ ನಗರದ ರುದ್ರಭೂಮಿಯಲ್ಲಿ ಪೊಲೀಸ್ ಬಂದೋಬಸ್ತ ನಲ್ಲಿ ಸ್ಮನಾಶನಕ್ಕೆ ಬಂದ ಅಶೋಕ್ ಪತ್ನಿ ಭೂಮಿ.
ಅಶೋಕ್ ಪತ್ನಿ ಭೂಮಿ ಸ್ಮಶಾನಕ್ಕೆ ಬರುತ್ತಿದ್ದಂತೆ ನೂಕಾಟ ತಳ್ಳಾಟ ನಡೆದಿದೆ. ಸದಾಶಿವ ನಗರದ ಸ್ಮಶಾನದಲ್ಲಿ ನಡೆಯುತ್ತಿರುವ ಅಶೋಕ್ ಅಂತಿಮ ವಿಧಿವಿಧಾನದ ಕಾರ್ಯಕ್ರಮದಲ್ಲಿ ನೂಕಾಟ ತಳ್ಳಾಟ ಮಾಡುತ್ತಲೆ ಭೂಮಿಯನ್ನು ಕರೆತಂದು ಮತ್ತೇ ಪೊಲೀಸ್ ಜೀಪನಲ್ಲಿ ಕೂರಿಸಿದರು.
ಮುಂಜಾಗೃತಾ ಕ್ರಮವಾಗಿ ಸ್ಮಶಾನದ ಮುಂದೆ ಒಂದು ಕೆ ಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.