ಬೆಳಗಾವಿ :
ಬೆಳಗಾವಿಯಲ್ಲಿ ಬಿಜೆಪಿ ಮುಖಂಡನ ಮೇಲೆ ಚಾಕು ಇರಿತ ಪ್ರಕರಣ ನನಗೆ ಮಾಹಿತಿ ಇಲ್ಲ ಎಂದು ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಮುಖಂಡನ ಮೇಲಿನ ಹಲ್ಲೆ ಪ್ರಕರಣವನ್ನು ಸಂಭಂದಪಟ್ಟ ಇಲಾಖೆ ನೋಡಿಕ್ಕೊಳ್ಳುತ್ತೆ. ಘಟನೆಯ ಬಗ್ಗೆ ಪರಿಶಿಲನೆ ಆಗಬೇಕು. ನಾನು ಅದರ ಬಗ್ಗೆ ಮಾತನಾಡಲ್ಲ. ತನಿಖೆ ಆಗಲಿ ಎಂದರು.
ವಿಜಯಪುರದಲ್ಲಿ ಕಾರ್ಮಿಕರು ಮೃತಪಟ್ಟ ಘಟನೆಗೆ ಸಂಬಂದಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಬಿಹಾರ ಕಾರ್ಮಿಕರು ಮೃತಪಟ್ಟಿದ್ದಾರೆ. ಮಾನವೀಯತೆಯಿಂದ ಪರಿಹಾರ ವನ್ನ ಕೊಡುವ ಕೆಲಸವನ್ನು ನಾವು ಮಾಡೆ ಮಾಡುತ್ತೇವೆ ಎಂದರು.