ಬೆಳಗಾವಿ: ನನ್ನ ತೀರ್ಮಾನ ಜನರು ತೆಗೆದುಕೊಳ್ಳುತ್ತಾರೆ. ನಿಮ್ಮತರ ರಾಜಕಾರಣ ಮಾಡಿಕೊಂಡು ಬಂದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ಹರಿಹಾಯ್ದರು.
ಅವರು ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದು ಚೆನ್ನಾಗಿ ಉಟಮಾಡಿ ದೇವೇಗೌಡರಿಗೆ ಚೂರಿ ಹಾಕಿದರು.
ಜೊತೆಗೆ ಇದ್ದು ಡಿ.ಕೆ.ಶಿವಕುಮಾರ, ಪರಮೇಶ್ವರ ಅವರನ್ನು ಮುಗಿಸಿಕೊಂಡು ಬಂದಿರಿ. ಈಗ ನನ್ನ ಲಾಯಲ್ಟಿ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದರು.