ಅಥಣಿ : ಬೆಳಗಾವಿ ಜಿಲ್ಲಾ ವಿಭಜನೆಯ ಕೂಗು ಅಥಣಿ ಯಲ್ಲಿ ಸದ್ದು ಮಾಡುತ್ತಿದೆ ಸದನದಲ್ಲಿ ಅಥಣಿ ಪ್ರತ್ತೇಕ ಜಿಲ್ಲೆಗೆ ಗಟ್ಟಿಯಾಗಿ ಧ್ವನಿ ಎತ್ತುವೆ ಎಂದು ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
ಜೆ ಎಚ್ ಪಟೇಲ ಅವರು ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಅಥಣಿ ಪ್ರತ್ತೇಕ ಜಿಲ್ಲೆಯಾಗುವ ಬೇಡಿಕೆ ಇತ್ತು ಇದುವರೆಗೂ ಯಿಡೇರಿಲ್ಲ ಸದನದಲ್ಲಿ ಈ ಕುರಿತು ಚರ್ಚೆ ಮಾಡುವೆ ಎಂದು ಲಕ್ಷ್ಮಣ ಸವದಿ ಭರವಸೆ ನೀಡಿದರು.
ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಇವತ್ತು ಅಥಣಿ ಸ್ವಯಂ ಪ್ರೇರಿತವಾಗಿ ಸಂಪೂರ್ಣ ಬಂದ್ ಆಗಿದೆ ಪಟ್ಟಣದ ಅಂಗಡಿ,ಮುಗ್ಗಟ್ಟು ಮಹಲ್, ಶಾಲಾ ಕಾಲೇಜು ಬಿದಿ ಬದಿ ವ್ಯಾಪಾರಿಗಳು ಬಂದ್ ಗೆ ಸಂಪೂರ್ಣ ಬೆಂಬಲ ಕೊರಿದ್ದಾರೆ.
ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬೃಹತ್ ರ್ಯಾಲಿ ಮೂಲಕ ಹೋರಾಟ ಹಮ್ಮಿಕೊಳ್ಳಲಾಗಿದ್ದು ವಿವಿಧ ಸಂಘಟನೆಗಳು ಹಾಗೂ ಹಳ್ಳಿಗಳಿಂದಲೂ ಜನ ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.