ಕೇರಳದಲ್ಲಿ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡ ತಿರುವನಂತಪುರಕ್ಕೆ ಆಗಮಿಸಿ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿತು. ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್ ಅವರು ಕೇರಳದ ಪವಿತ್ರ ದೇವಾಲಯಕ್ಕೆ ಬೆಟ್ಟಿ ನೀಡಿದ್ದಾರೆ.
ಕೇರಳದ ರಾಜಧಾನಿಗೆ ಆಗಮಿಸಿದ ಭಾರತ ತಂಡಕ್ಕೆ ಭವ್ಯ ಸ್ವಾಗತ ದೊರೆಯಿತು. ಅವರನ್ನು ಸಾಂಪ್ರದಾಯಿಕ ಮಲಯಾಳಿ ಶೈಲಿಯೊಂದಿಗೆ ಕಥಕ್ಕಳಿ ನೃತ್ಯಗಾರರು ಮತ್ತು ಕೇರಳದ ಸಾಂಪ್ರದಾಯಿಕ ಮುಂಡುಗಳೊಂದಿಗೆ ಸ್ವಾಗತಿಸಲಾಯಿತು.