ಚಿಕ್ಕೋಡಿ: ಜತ್ ಸೋಲಾಪುರ, ಕೊಲ್ಹಾಪುರ, ಲಾಥೂರನ್ನು ಕರ್ನಾಟಕ ಸೇರಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹಲ್ಯಾಳ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕರಿಗೆ ಕನ್ನಡ ಶಾಲು ಹಾಕಿ ಧ್ವಜ ಹಿಡಿಸಿದ ಕನ್ನಡಿಗರು.ಅಥಣಿ ಪಟ್ಟಣದಲ್ಲಿ ವಿನೂತನ ಪ್ರತಿಭಟನೆ ಮಾಡಿದರು.
ಮಹಾರಾಷ್ಟ್ರ ಸಿ ಎಮ್ ಭಾವಚಿತ್ರದಲ್ಲಿ ಬಾಯಿಗೆ ಚಪ್ಪಲಿ ಇಟ್ಟ ಕನ್ನಡಿಗರು. ಎಮ್ ಇ ಎಸ್, ಶಿವಸೇನೆ, ಮತ್ತು ಮರಾಠಿ ಪುಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.