ಹಲುವು ಬೇಡಿಕೆಗಳಿಗಾಗಿ ಪತ್ರಿಕಾಗೋಷ್ಠಿ ನಡೆಸಿದ ಕುರಿಕಾಹಿ ಸಂಘಟನೆ

  • 15 Jan 2024 , 3:04 AM
  • Belagavi
  • 205

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯು ದೂರದೃಷ್ಠಿ ಯೋಜನೆಯಾಗಿದ್ದು, ಕುರಿಗಾರ ಬದುಕಿನಲ್ಲಿ ಆಶಾಕಿರಣ ತರುವಂತಾಗಿದೆ. ಇದಕ್ಕೆ ಕರ್ನಾಟಕ ರಾಜ್ಯ ಘನ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 

ಸರ್ಕಾರ ಇನ್ನೊಂದು ಮಹತ್ತರ ಯೋಜನೆಯನ್ನು ಕರ್ನಾಟಕದ ಎಲ್ಲ ಕುರಿ ಮತ್ತು ಆಡು ರೈತ ಉತ್ಪಾದಕ ಕಂಪನಿಗಳನ್ನು ನಿರ್ಮಿಸುವುದಾಗಿದೆ. ಈಗಾಗಲೇ ರಾಜ್ಯದಲ್ಲಿ 75 ಕ್ಕೂ ಹೆಚ್ಚು ಇಂತಹ PFOಗಳು ಕಾರ್ಯಾರಂಬಗೊಂಡಿವೆ. ಇಲ್ಲಿ ಸಾವಿರಾರು ಜನ ಬಡ ಕುರಿಗಾರರು ಮತ್ತು ಆಡು ಉತ್ಪಾದಕರು ಸದಸ್ಯರಾಗಿದ್ದು ಮುಖ್ಯವಾಗಿ ಉತ್ಪಾದನೆ ಮತ್ತು ಮಾರುಕಟ್ಟೆಗೆ ಪ್ರಬಲವಾದ ವೇದಿಕೆಯಾಗಿ ರೂಪಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಈ ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಪ್ರಮುಖವಾಗಿ ಆರ್ಥಿಕತೆಯನ್ನು ಬಲಪಡಿಸುವ ದಿಕ್ಕಿನಲ್ಲಿ ವೇದಿಕೆ ಆಗುತ್ತಲಿದೆ.

ಆದರೆ ದುರಾದೃಷ್ಟವಶಾತ ಪಶು ವೈದ್ಯಕೀಯ ಇಲಾಖೆಯಿಂದ ಕುರಿ ನಿಗಮದ ಮೂಲಕ ಅನುಸ್ಥಾನಗೊಳ್ಳುವ ಯಾವುದೇ ಯೋಜನೆಯನ್ನು ಈ 11 ಗಳಿಗೆ ನೀಡಲಾಗುತ್ತಿಲ್ಲ ಇದು ವಿಚಿತ್ರ ಮತ್ತು ಮಲತಾಯಿ ಮೊರಣೆಯಾಗಿರುತ್ತದೆ ಕಾರಣ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳು ಮತ್ತು ಯೋಜನೆಗಳು ನಮ್ಮ FPO ಗಳಿಗೂ ದೊರಕುವಂತಾಗಲು ಸೂಕ್ತ ಆದೇಶ ನೀಡಲು ಕೋರಲಾಗಿದೆ.

Read All News