ಆನಂದ ಜಿಜ್ಜಬಸಪ್ಪನವರಿಗೆ ಪ್ರಶಂಸನಾ ಪತ್ರ

  • shivaraj bandigi
  • 12 Jun 2024 , 6:02 AM
  • Vijayapur
  • 3133

ವಿಜಯಪುರ :  ಕಳೆದ ಎಪ್ರಿಲ್ 4 ರಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ಜಮೀನಿನಲ್ಲಿ ಕೊರೆದ 250 ಅಡಿ ಆಳದ ಕೊಳವೆ ಬಾವಿಯಲ್ಲಿ ಸುಮಾರು 17 ಅಡಿ ಆಳದಲ್ಲಿ ಸಿಲುಕಿದ್ದ ಎರಡು ವರ್ಷದ ಮಗುವನ್ನು ಸತತ 20 ಗಂಟೆಗಳ ಕಾಲ‌ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಹಿನ್ನಲೆಯಲ್ಲಿ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಪೋಲಿಸ್ ಮಹಾನಿರ್ದೇಶಕ ಕಮಲ ಪಂತ ಅವರು ಆನಂದ ಜಜ್ಜಿಬಸಪ್ಪನವರ ಇವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ. 

ಪತ್ರದಲ್ಲಿ ಆನಂದ ಅವರ ಧೈರ್ಯ ಮತ್ತು ಸಮಯ ಪ್ರಜ್ಞೆಯನ್ನು ಪ್ರಶಂಸಿ, ಇನ್ನೂ ಮುಂದೆಯೂ ಕೂಡಾ ತಮ್ಮ ನಿಮ್ಮ  ಸೇವೆ ಅನುಕರಿಣೀಯವಾಗಿರಲೆಂದು ತಿಳಿಸಿದ್ದಾರೆ.

Read All News