ವಿದ್ಯುತ್ ತಂತಿ ರಿಪೇರಿ ಮಾಡಲು ಹೋಗಿ ವ್ಯಕ್ತಿ ಸಾವು

  • 15 Jan 2024 , 11:34 AM
  • Belagavi
  • 838

ಅಥಣಿ :ತಾಲೂಕಿನ ತಂಗಡಿ ಗ್ರಾಮದಲ್ಲಿ ವಿದ್ಯುತ್ ತಂತಿ ರಿಪೇರಿ ಮಾಡಲು ಹೋಗಿ ವ್ಯಕ್ತಿ ಸಾವನಪ್ಪಿದ್ ಘಟನೆ ಸಂಭವಿಸಿದೆ.

ಮೃತ ವ್ಯಕ್ತಿ ಆನಂದ್ ಬಾಬಾಸಾಹೇಬ್ ಪಾಟೀಲ್ 42 ಎಂದು ಗುರುತಿಸಲಾಗಿದೆ,ಗದ್ದೆಯಲ್ಲಿ ಕಾರ್ಬನ್ ದೋಷದಿಂದ ವಿದ್ಯುತ್ ಕಂಬಕ್ಕೆ ಏರಿ ಕರೆಂಟ್ ಕಾರ್ಭನ್ ತೇಗೆಯುತ್ತಿರುವಾಗ ವಿದ್ಯುತ್ ಸ್ಪರ್ಶ ಹೊಂದಿದ ಪರಿಣಾಮ ಯುವಕ ಸ್ಥಳಗಳಲ್ಲಿ ವಿದ್ಯುತ್ ತಗುಲಿ ಸಾವನಪ್ಪಿದ್ದಾನೆ.

ಈ ಕುರಿತು ಗ್ರಾಮಸ್ಥರು ಹೆಸ್ಕಾಂ ಇಲಾಖೆಯ ಅಧಿಕಾರಿಗಳ ಮೇಲೆ ಕುರಿತು ಆಕ್ರೋಶ ಹೋರಹಾಕಿದರು ಘಟನಾ ಸ್ಥಳದಲ್ಲಿ ಅಥಣಿ ಪೊಲೀಸ್ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರು.

ಮೃತ ವ್ಯಕ್ತಿಯ ಕುಟುಂಬಸ್ಥರ ಅಕ್ರಂದನ್ ಮುಗಿಲು ಮುಟ್ಟಿದ್ದು ಈ ಕುರಿತು ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read All News