ಬೈಲಹೊಂಗಲ : ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲಾ ವಿಭಜಿಸುವದನ್ನು ವಿರೋಧಿಸಿ ಇಂದು ಸಂಜೆ 5ಕ್ಕೆ ಪಟ್ಟಣದ ಶಾಖಾಮೂರುಸಾವಿರಮಠದಲ್ಲಿ ಮುಂದಿನ ಹೋರಾಟದ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಸಭೆಯನ್ನು ಕರೆಯಲಾಗಿದ್ದು ಎಲ್ಲರೂ ಸಭೆಗೆ ಆಗಮಿಸಬೇಕು.
ಬೈಲಹೊಂಗಲದ ಜನ ಮೊದಲಿನಿಂದಲೂ ಅಖಂಡ ಬೆಳಗಾವಿ ಜಿಲ್ಲೆಗೆ ಆಗ್ರಹಿಸುತ್ತಿದ್ದು ಈಗ ಸರ್ಕಾರ ಜಿಲ್ಲಾ ವಿಭಜನೆಗೆ ಮುಂದಾಗಿದೆ ಇದನ್ನು ವಿರೋಧಿಸಿ ಉಗ್ರ ಹೋರಾಟ ಮಾಡುವ ಅವಶ್ಯಕತೆ ಇದ್ದು ಎಲ್ಲರೂ ತಮ್ಮ ಬಂಧು ಮಿತ್ರರೊಂದಿಗೆ ಆಗಮಿಸಿ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಹೋರಾಟ ಸಮಿತಿ ಅಧ್ಯಕ್ಷ ಚಿತ್ರನಟ ಶಿವರಂಜನ ಬೋಳಣ್ಣವರ ತಿಳಿಸಿದ್ದಾರೆ.