ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಚಿವೆ ಹೆಬ್ಬಾಳಕರ ಚಾಲನೆ

  • shivaraj B
  • 26 Aug 2024 , 12:12 PM
  • Belagavi
  • 328

ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮವನ್ನು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶ್ರೀ ಕೃಷ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಡೊಳ್ಳು ಬಾರಿಸುವ ಮೂಲಕ ಶ್ರೀ ಕೃಷ್ಣನ ರಥೋತ್ಸವದ ಮೆರವಣೆಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಕನ್ನಡ ಸಂಸ್ಕ್ರತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ರಮೇಶ್ ಹುಕ್ಕೇರಿ, ಬಾಲಕೃಷ್ಣ ಪಾಟೀಲ, ಬಸವರಾಜ ಮೊದಗೇಕರ್, ಪಿ.ಎಲ್.ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ಎನ್.ಎನ್.ಪಾಟೀಲ, ಶಿವಲಿಂಗ ಪೂಜಾರಿ, ಶೀತಲ್ ಮುಂಡೆ, ಶಾಸ್ತ್ರೀ, ಆನಂದ ಚೌಗಲಾ, ಜಯಗೌಡ ಪಾಟೀಲ, ವಾಯ್.ವಾಯ್.ಪಾಟೀಲ, ವಿಠ್ಠಲ ಪಾಟೀಲ, ವಾಯ್ ವಾಯ್ ಗಡ್ಕರಿ ಮುಂತಾದವರು ಉಪಸ್ಥಿತರಿದ್ದರು.

Read All News