ಬೈಲಹೊಂಗಲ- ತಾಲೂಕಿನ ನಯಾನಗರದ ಸರ್ಕಾರಿ ಪ್ರೌಢಶಾಲೆಯ ಎಸಡಿಎಂಸಿ ಅಧ್ಯಕ್ಷರಾಗಿ ಗ್ರಾಮದ ಮುಖಂಡ ನಾರಾಯಣ ನಲವಡೆ ಆಯ್ಕೆಯಾಗಿದ್ದಾರೆ. .
ಸತತವಾಗಿ ಮೂರು ಬಾರಿ ಅಧ್ಯಕ್ಷರಾಗಿ ಆಯ್ಕಯಾದ ಇವರು ಈ ಮೊದಲು ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು. ಇದನ್ನು ಗಮನಿಸಿದ ಗ್ರಾಮದ ಹಿರಿಯರು ನಾರಾಯಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇದೇ 3 ರಂದು ಅಧಿಕಾರ ಸ್ವೀಕಾರ ನಡೆಯಲಿದೆ.
ವರದಿ : ರವಿಕಿರಣ್ ಯಾತಗೇರಿ