ಬೆಳಗಾವಿ :ರಾಜ್ಯದಾದ್ಯಂತ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕ ಹಾಗೂ ಶುಶ್ರೂಷಕಿಯರ ಸೇವೆಯನ್ನು ಖಾಯಂಗೊಳಿಸುವುದು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ಇನ್ನೀತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಶುಶ್ರೂಷಕರು ಹಾಗೂ ಶುಶ್ರೂಷಕಿಯರುಗಳ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಸುವರ್ಣ ವಿಧಾನ ಸೌಧದ ಸಮೀಪದಲ್ಲಿ ಬಸ್ತವಾಡ ಗ್ರಾಮದಲ್ಲಿ ಹಾಕಲಾದ ಪ್ರತಿಭಟನಾ ವೇದಿಕೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸುವ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ರಾಜ್ಯದಾದ್ಯಂತ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕ ಹಾಗೂ ಶುಶ್ರೂಷಕಿಯರು ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅತಿ ಕಡಿಮೆ ಸಂಬಳ ಇದೆ. ಸದ್ಯ ₹ ೧೩,೦೦೦ ನಿಗದಪಿಡಿಸಿದ್ದು ಈ ಪೈಕಿ ಕೈಗೆ ಕೇವಲ ₹ ೧೧೦೦೦ ಗಳಿಗೆ ಸಿಗುತ್ತದೆ. ಈ ಅತ್ಯಂತ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಇಂದಿನ ದಿನಮಾಗಳಲ್ಲಿ ಇಷ್ಟು ಸಂಬಳದಲ್ಲಿ ಹೇಗೆ ಜೀವನ ನಡೆಸುವುದು. ಕೋವಿಡ್-೧೯ ಸಂದರ್ಭದಲ್ಲಿ ಯಾವುದೇ ಸಮಯದಲ್ಲೂ ಸರ್ಕಾರ ನೀಡಿರುವ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿಕೊಂಡು ಬಂದಿದ್ದೇವೆ. ಜೀವದ ಹಂಗು ತೊರೆದು ಸೇವೆ ಸಲ್ಲಿದ್ದೇವೆ. ನಮ್ಮ ಜೀವನವನ್ನೇ ಕೋಡ್ ರೋಗಿಗಳಿಗೆ ಮುಡಿಪಾಗಿಟ್ಟಿದ್ದೇವೆ.
ಇನ್ನು ಮುಂದೆ ಕೂಡ ಇಲಾಖೆ ಹಾಗೂ ಸರ್ಕಾರದೊಂದಿಗೆ ಎಂತಹ ಕಷ್ಟದ ಸಂದರ್ಭದಲ್ಲೂ ಸೇವೆ ಸಲ್ಲಿಸಲು ಬದ್ಧರಾಗಿದ್ದೇವೆ. ಈ ಸೇವೆ ಬಿಟ್ಟು ಯಾವುದೇ ವೃತ್ತಿ ನಮಗೆ ಬರುವುದಿಲ್ಲ. ಆದ್ದರಿಂದ ನಮ್ಮ ಸೇವೆಯನ್ನು ಖಾಯಂ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ನಮ್ಮ ಸೇವೆಯನ್ನು ಕಾಯಂ ಮಾಡುವವರೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.ಈ ವೃತ್ತಿಯನ್ನು ನಂಬಿಕೊಂಡು ನಮ್ಮ ಕುಟುಂಬಗಳನ್ನು ಅತೀ ಕಡಿಮೆ ಸಂಬಳದಲ್ಲಿ ಸರಿದೂರಿಸಿಕೊಂಡು ಬಂದಿರುತ್ತೇವೆ.
ನಮ್ಮ ಸೇವೆಯನ್ನು ಕಾಯಂ ಮಾಡಿಕೊಳ್ಳುವವರೆಗೆ ಗುತ್ತಿಗೆ-ಹೊರಗುತ್ತಿಗೆ ಆಧಾರದಲ್ಲಿ ಆಗಲಿ, ನೇರ ನೇಮಕಾತಿ ಆಗಲಿ ಶುಶ್ರೂಷಕ, ಶುಶ್ರೂಷಕಿಯರುಗಳನ್ನು (ಶುಶ್ರೂಷಾಧಿಕಾರಿಗಳು) ನೇಮಿಸಿಕೊಳ್ಳಬಾರದು. ಸದ್ಯ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಶುಶ್ರೂಷಕ, ಶುಶ್ರೂಷಕಿಯರಿಗೆ ಪ್ರತಿ ತಿಂಗಳು ೧ನೇ ತಾರೀಖಿನಂದು ಸಂಬಳ ಪಾವತಿಸಬೇಕು. ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಶುಶ್ರೂಷಾಧಿಕಾರಿಗಳನ್ನು ಕೀಳುಮಟ್ಟದಿಂದ ನೋಡುವ ಪ್ರವೃತ್ತಿಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿಗೌರವಾಧ್ಯಕ್ಷ ಪಿ ಎಚ್ ನೀರಲಕೇರಿ, ರೂಪಾದೇವಿ ಬಾಳೆಕುಂದ್ರಿ, ಸುಜಾತಾ ಗಂಡಗೋಲೆ, ಸಾಯಿದಾ ಇನಾಮದಾರ, ಅನಿತಾ, ಶೈಲಾ ಹುಲಕುಂದ, ಮೆಹಬೂಬ್ ಲೋಕಾಪುರಿ, ಪರುವಿನ ಲೋಕಾಪುರಿ ಸೇರಿದಂತೆ ಗದಗ, ಧಾರವಾಡ, ಹಾವೇರಿ, ಬೆಳಗಾವಿ ಜಿಲ್ಲೆಯ ಶುಶ್ರೂಷಕರು ಇದ್ದರು.