ಬೈಲಹೊಂಗಲ : ಕಾರ್ತಿಕ ಮಾಸದ ಪ್ರಯುಕ್ತ ದಿ. 13ರಂದು ಸಂಜೆ 6ಕ್ಕೆ ಪಟ್ಟಣದ ಶಾಖಾ ಮೂರುಸಾವಿರಮಠದಲ್ಲಿ ಕಾರ್ತಿಕ ದೀಪೋತ್ಸವ ಸಮಾರಂಭ ಜರುಗಲಿದೆ.
ಶಾಖಾಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮಿಜಿ ನೇತೃತ್ವ ವಹಿಸುವರು. ಸದ್ಭಕ್ತರು ಕಾರ್ತಿಕ ದೀಪೋತ್ಸವ ಭಾಗವಹಿಸಿ ಶ್ರೀ ನೀಲಕಂಠೇಶ್ವರರ ಕೃಪೆಗೆ ಪಾತ್ರರಾಗುವಂತೆ ಶ್ರೀಮಠ ಪ್ರಕಟನೆಯಲ್ಲಿ ತಿಳಿಸಿದೆ.