ಬೆಳಗಾವಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ಏಕತಾ ಯುವಕ ಮಂಡಳವು ಬೆಳಗಿನ ಉಪಾಹಾರಕ್ಕೆ ಜಿಲೆಬಿ, 56 ಪದಾರ್ಥಗಳಿಂದ ತಯಾರಿಸಿದ ಬೋಗ ಡೋಕಲಾ, ಸಮೋಸಾ ಮತ್ತು ಮಧ್ಯಾಹ್ನ ಪುರಿ ಊಟ, ಸಂಜೆ ಹೊಳಿಗೆ ಊಟದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಡಿ, ಬೆಳಗಾವಿ ನಗರದ ಪ್ರತಿ ಬಡಾವಣೆಗಳಲ್ಲೂ ಪ್ರಸಾದ್ ವಿತರಣೆ ಮಾಡಲಾಗುತ್ತಿದೆ. ಬೆಳಗಿನ ಉಪಾಹಾರದ ವಿತರಣೆ ಈಗಾಗಲೇ ಪ್ರಾರಂಭವಾಗಿದೆ.
ಬೆಳಗಾವಿ ಹೆಮು ಕಲ್ಯಾಣಿ ಚೌಕ್ನಲ್ಲಿ ಈಗಾಗಲೇ ಪಾಕ ರೆಡಿ ಮಾಡಲಾಗುತ್ತಿದೆ. ಬಾಣಸಿಗರು ಜಿಲೆಬಿ, ಬೋಗ ಡೋಕಲಾ, ಸಮೋಸಾ ಮತ್ತು ಪುರಿಗಳನ್ನು ತಯಾರಿಸುತ್ತಿದ್ದಾರೆ.
"ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಇದು ಒಂದು ಐತಿಹಾಸಿಕ ಘಟನೆ. ಈ ಘಟನೆಯನ್ನು ಗುರುತಿಸುವ ಸಲುವಾಗಿ, ನಾವು ಈ ಪ್ರಸಾದ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಧಾರ್ಮಿಕ ಭಾವನೆಗಳನ್ನು ಬೆಳೆಸುವ ಉದ್ದೇಶದಿಂದ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ." ಎಂದು ಏಕತಾ ಯುವಕ ಮಂಡಳ ಹೇಳಿದೆ.