ಬೆಂಗಳೂರು : ಗಾಲಿ ಜನಾರ್ಧನ ರೆಡ್ಡಿ ಅವರ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವಕ್ತಾರ ಹಾಗು ರೆಡ್ಡಿ ಅವರ ಆಪ್ತರಾದ ಸಂಜಯ ಬೆಟಗೇರಿಯವರನ್ನು ಭೇಟಿಯಾದ ಪ್ರವೀಣ್ ಹಿರೇಮಠ ತನ್ನ ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಬೆಳಗಾವಿ ಉತ್ತರ ಮತ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರವೀಣ್ ಹಲವು ಜನ ಸೇವೆ ಯೋಜನೆಗಳ ಮೂಲಕ ಮನೆ ಮಾತಾಗಿದ್ದರು.
ಏನೆ ಆಗಲಿ ಕೆ ಆರ್ ಪಿಪಿ ಸಾಥ ಬಿಡೋ ಮಾತೆ ಇಲ್ಲ
ರಾಜಕೀಯದಲ್ಲಿ ಸೋಲು ಗೆಲುವು ಎಲ್ಲ ಕಾಮನ್ ಎಂದು ಹೇಳಿರುವ ಪ್ರವೀಣ ಏನೆ ಆಗಲಿ ಗಾಲಿ ಜನಾರ್ಧನ ರೆಡ್ಡಿ ಹಾಗು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರ ಜನ ಸೇವೆ ಮುಂದುವರೆಸುತ್ತೇನೆ ಎಂದು ಪ್ರವೀಣ್ ಹೇಳಿದ್ದಾರೆ.