ನೇಹಾ ಕೊಲೆ ಆರೋಪಿಗೆ ಅತ್ಯುಗ್ರ ಶಿಕ್ಷೆಯಾಗುವಂತೆ ಆಗ್ರಹಿಸಿ ಪ್ರತಿಭಟನೆ

  • shivaraj bandigi
  • 20 Apr 2024 , 8:34 AM
  • Belagavi
  • 360

ಬೆಳಗಾವಿ: ಅಖಿಲ ಕರ್ನಾಟಕ ಜಂಗಮ ಸಮಾಜ ಹಾಗೂ ಹಿಂದೂಪರ ಸಂಘಟನೆಗಳ ವತಿಯಿಂದ ಇಂದು ಮತಾಂತರದ ದುಷ್ಕ್ರುತ್ಯಕ್ಕೆ ಬಲಿಯಾದ ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆಗಡುಕ ಫಯಾಜ ಧರ್ಮಾಂಧನಿಗೆ ಅತ್ಯುಗ್ರ ಶಿಕ್ಷೆಯಾಗುವಂತೆ ಆಗ್ರಹಿಸಿ ಪ್ರತಿಭಟಿನೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಅಷ್ಟೇ ಅಲ್ಲದೆ ಹತ್ಯೆಯಾಗಿರುವ ಹೆಣ್ಣುಮಗಳ ಬಗ್ಗೆ ಹಗುರವಾದ ಮಾತುಗಳಿಂದ ಚಾರಿತ್ರ್ಯ ವಧೆ ಮಾಡಲು ಪ್ರಯತ್ನಿಸಿ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ನಡೆಯನ್ನು ಖಂಡಿಸಿ ರಾಜ್ಯ ಸರ್ಕಾರಕ್ಕೆ ದಿಕ್ಕಾರ ಕೂಗಿದರು, ನೇಹಾಳ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.

Read All News