ದೆಹಲಿ:ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಐತಿಹಾಸಿಕ ಘೋಷಣೆ ಮಾಡಿದ್ದಾರೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಪ್ರಕಾರ, ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಗ್ಯಾರಂಟಿ ನೀಡುವುದಾಗಿ ಹೇಳಿದ್ದಾರೆ.
ಈ ಘೋಷಣೆಯು 15 ಕೋಟಿ ರೈತ ಕುಟುಂಬಗಳ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಎಂಎಸ್ಪಿ ಕಾನೂನುಬದ್ಧ ಖಾತರಿ ರೈತರಿಗೆ ನ್ಯಾಯಯುತ ಬೆಲೆ ಖಾತ್ರಿಪಡಿಸುತ್ತದೆ ಮತ್ತು ಅವರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಾಂಗ್ರೆಸ್ ಪಕ್ಷ ನಿಮ್ಮ ಏಳಿಗೆಗೆ ಬದ್ಧವಾಗಿದೆ,ಎಂಎಸ್ಪಿ ಕಾನೂನುಬದ್ಧ ಖಾತರಿ ನ್ಯಾಯದ ಹಾದಿಯಲ್ಲಿ ನಮ್ಮ ಮೊದಲ ಭರವಸೆಯಾಗಿದೆ ಎಂದು ರಾಗಾ ಹೇಳಿದ್ದಾರೆ.
कांग्रेस की गारंटी 📢
— Congress (@INCIndia) February 13, 2024
किसानों को स्वामीनाथन कमीशन के अनुसार MSP की गारंटी देंगे।
: @RahulGandhi जी
📍 छत्तीसगढ़ pic.twitter.com/6J9jImKSIi
ಈ ಘೋಷಣೆಯು ರಾಷ್ಟ್ರೀಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಚಾಲನೆ ನೀಡಿದೆ.
ಎಲ್ಲಾ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಪ್ರಕಾರ ಎಂಎಸ್ಪಿ ಕಾನೂನುಬದ್ಧ ಖಾತರಿ.
15 ಕೋಟಿ ರೈತ ಕುಟುಂಬಗಳಿಗೆ ಲಾಭ.
ರೈತರ ಆದಾಯ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.
ರಾಷ್ಟ್ರೀಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಚಾಲನೆ ನೀಡಿದೆ.