ಬೆಳಗಾವಿ :ಹಿರೆಬಾಗೇವಾಡಿಯಲ್ಲಿ ರಮೇಶ ಜಾರಕಿಹೊಳಿರವರ ಅಭಿಮಾನಿ ಬಳಗದಿಂದ ನಡೆದ ಬ್ರಹತ ಅಭಿಮಾನದ ಕಾರ್ಯಕರ್ತರ ಸಮಾವೇಶ ಅದ್ದೂರಿಯಿಂದ ಜರುಗಿದೆ.
ಸುಮಾರು 5 ಸಾವಿರ ಅಭಿಮಾನಿಗಳು ಸೇರಿದ ಈ ಸಮಾವೇಶದಲ್ಲಿ ಜಾರಕಿಹೊಳಿಯವರಿಗೆ ಹೂವಿನ ಹಾರದ ಮೂಲಕ ಜೈಕಾರ ಹಾಕಿ ಸ್ವಾಗತಿಸಿದ್ದಾರೆ.
ಕಾಂಗ್ರೆಸ ಪಕ್ಷಕ್ಕೆ ಬಿಸಿ ಮುಟ್ಟಿಸಿದ ಜಾರಕಿಹೊಳಿ ,ಕಾಂಗ್ರೆಸ್ ಪಕ್ಷ ಕೆಳಮಟ್ಟಕ್ಕೆ ಬಂದಿದೆ ಎಂದು ಟಾಂಗ ಕೊಟ್ಟಿದ್ದಾರೆ.
ಕಾಂಗ್ರೆಸ್ ಮಾಡಿದ ಗೋಲ್ಮಾಲ ಸಲುವಾಗಿ ಕಾಂಗ್ರೆಸ್ ಬಿಟ್ಟೆ ಬೆಳಗಾವಿ ಮತ್ತು ಗ್ರಾಮೀಣದಲ್ಲಿ ಎಲ್ಲ ತರಹದ ಕೆಲಸ ಮಾಡುತ್ತೇನೆ ಎಂದು ಜಾರಕಿಹೋಳಿ ಹೇಳಿದ್ದಾರೆ.
2ತಿಂಗಳಲ್ಲಿ ಕಾಂಗ್ರೆಸ್ ಖಾಲಿ ಆಗುತ್ತದೆ ಎಂದ ಜಾರಕಿಹೊಳಿ,ಬಿಜೆಪಿ ಪಕ್ಷ ನೀಡುವ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ತಿಳಿಸಿದ್ದಾರೆ.
ಗ್ರಾಮೀಣ ಶಾಸಕಿ ಕಾಲೆಳೆದ ಜಾರಕಿಹೊಳಿ ಕಿತ್ತೂರ ಚೆನ್ನಮನವರಿಗೆ ಅಪಮಾನವಾದರೆ ಗ್ರಾಮೀಣ ಶಾಸಕಿ ಮತ್ತು ಕೆಪಿಸಿಸಿ ಅಧ್ಯಕ್ಷ ಕಾರಣ ಎಂದು ಗುಡುಗಿದ್ದಾರೆ.
ಯಳ್ಳೂರ ಘಡನಲ್ಲಿನ ಶಿವಾಜಿ ಮಹಾರಾಜ ಪ್ರತಿಮೆ ಅನಾವರಣಗೊಳಿಸಲು ಬಿಜೆಪಿಯಿಂದ ನಡೆಸಬೇಕು ಎಂದು ಹೇಳಿದ್ದಾರೆ.