ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಭಾರೀ ಮಳೆಗೆ ರಸ್ತೆಗಳೆಲ್ಲ ಸಮುದ್ರದಂತೆ ಆಗಿದೆ.
ಕಳೆದೆರಡು ತಾಸುಗಳ ಕಾಲ ಬಿಟ್ಟೂ ಬಿಡದೇ ಸುರಿದ ಭಾರಿ ಮಳೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಡಿಗೂ ಮಿಕ್ಕಿ ಹರಿದ ಮಳೆ ನೀರು.
ಪಟ್ಟಣದ ಅಂಗಡಿ ಕಛೇರಿಗಳ ಆವರಣಕ್ಕೆ ನುಗ್ಗಿದ ಮಳೆ ನೀರಿನ ಅವಾಂತರದಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದ ಮಳೆ ನೀರನ್ನ ಹೊರಹಾಕಲು ಹರಸಾಹಸ ಪಡುತ್ತಿರುವ ವ್ಯಾಪಾರಸ್ಥರು.