ಅಥಣಿ : ಕುಮಠಳ್ಳಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ವಿಚಾರದಲ್ಲಿ ಅಥಣಿಯಲ್ಲಿ ಲಕ್ಷ್ಮಣ್ ಸವದಿ ಕಣ್ಣಿರು ಹಾಕಿರುವ ಭಾವನಾತ್ಮಕ ಘಟನೆ ನಡೆದಿದೆ.
ಲಕ್ಷ್ಮಣ್ ಸವದಿಗೆ ಪರೋಕ್ಷವಾಗಿ ಟಿಕೆಟ್ ಇಲ್ಲಾ ಎಂದು ದೆಹಲಿಯಲ್ಲಿ ಸಿಎಂ ಹೇಳಿಕೆ ನೀಡಿದರು. ಈ ವಿಚಾರವಾಗಿ ಅಥಣಿಯಲ್ಲಿ ಲಕ್ಷ್ಮಣ್ ಸವದಿ ಕಣ್ಣಿರು ಹಾಕಿದ್ದಾರೆ.
ನನ್ನ ಸಿಎಂ ಟಿಕೆಟ್ ಇಲ್ಲಾ ಎಂದು ಹೇಳಿದ್ದಾರೆ ೨೦೦೪ ರಂದು ನಾನು ಈ ಪಕ್ಷವನ್ನು ಸೇರಿದೆ ಸುಮಾರು ಇಪ್ಪತ್ತು ವರ್ಷಗಳಿಂದ ನಾನು ಪಕ್ಷವನ್ನು ಸಂಘಟನೆ ಮಾಡಿದ್ದೇನೆ ನಾನು ಇವತ್ತುಪಕ್ಷದ ವರಿಷ್ಠರಿಗೆ ಕೈ ಮುಗಿದು ಮನವಿ ಮಾಡುತ್ತೇನೆ ಮನೆಯಿಂದ ನನ್ನ ಹೊರಗೆ ದುಡಬೇಡಿ.
ನಾನು ನಿಷ್ಟಾವಂತ ಕಾರ್ಯಕರ್ತ ನನಗೆ ಅನ್ಯಾಯ ಮಾಡಬೇಡಿ ಯಡಿಯೂರಪ್ಪ, ಈಶ್ವರಪ್ಪ ನಿನೆ ಮುಂದಿನ ಸಿಎಂ ಎಂದು ಹೇಳಿದ್ದರು ಯಡಿಯೂರಪ್ಪನವರ ನನ್ನ ಕರೆದು ನಿನಗೆ ನಾನು ತಂದೆ ಸ್ಥಾನದಲ್ಲಿ ಇದ್ದೇನೆ ಎಂದು ಹೇಳಿದರು.
ನನಗೆ ಹೇಳಿದ ಮಾತು ನೀವು ಯಾರು ಈಡೇರಿಸಿಲ್ಲ, ಮಂಜುನಾಥ್ ಸನ್ನಿಧಿಯಲ್ಲಿ ನೀವು ಬನ್ನಿ ಎನ್ನುವ ಮೂಲಕ ಲಕ್ಷ್ಮಣ್ ಸವದಿ ಸವಾಲು ಹಾಕಿದರು.
ಕುಮಾರಸ್ವಾಮಿ ಅವರಿಗೆ ವಚನ ಭ್ರಷ್ಟ ಎಂದು ಹೇಳುತ್ತಿರಿ ನೀವು ಏನು...!?
ಬನ್ನಿ ಮಂಜುನಾಥ್ ಸನ್ನಿಧಿಗೆ, ನೀವು ನನ್ನಗೆ ಮಾತು ನೀಡಲ್ಲ ಎಂದರೆ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ನನಗೆ ಟಿಕೆಟ್ ಇಲ್ಲ ಎಂದು ನನ್ನ ಗೇಳೆಯ ಸಿಎಂ ಬಸವರಾಜ್ ಹೇಳಿದ್ದಾರೆ ಭಲೇ ಬಸವರಾಜ್ ಒಳ್ಳೆಯ ಮಾತು ಹೇಳಿದ್ದೀರಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಾತು ಕೇಳಿ ನಾನು ಎಂಎಲ್ಸಿ ಆದೆ ಆ ಚುನಾವಣೆಯನ್ನು ನನ್ನ ಹೆಸರು ಮೇಲೆ ಆರು ಜನ ಗುಂಡ್ಲೆ ಚಿನ್ನೆ ಹಾಕಿದರು ಅವರು ಯಾರು ಎಂದು ಹೇಳುವುದಿಲ್ಲ ಇದೆ ೧೩ ರಂದು ನಿಮ್ಮ ಅಭಿಪ್ರಾಯ ಅಂತಿಮವಾಗಿ ಭಾಷಣ ಮಾಡುವ ಸಮಯದಲ್ಲಿ ಸವದಿ ಕಣ್ಣಿರು ಹಾಕಿದರೂ.
ನನ್ನಗೆ ಬೆಂಬಲ ನೀಡುವಂತೆ ಸವದಿ ಕೈಮುಗಿದು ಜನರಲ್ಲಿ ಮನವ ಮಾಡಿದರು ನೀವು ಮನೆಯಲ್ಲಿ ಇರುವಂತೆ ಹೇಳಿದರೇ ನಾನು ಮನೆಯಲ್ಲಿ ಇರುತ್ತೇನೆ ಒಂದು ವೇಳೆ ಚುನಾವಣೆ ಬನ್ನಿ ಎಂದರೆ ನಾನು ಚುನಾವಣೆ ಬರುತ್ತೇನೆ ನಾನು ರಾಜಕೀಯ ಸಂಕಷ್ಟದಲ್ಲಿ ಇದ್ದೇನೆ ನನ್ನ ಕೈ ಬಿಡಬೇಡಿ ಎಂದು ಹೇಳಿದರು.
ಸಭೆಯಲ್ಲಿ ಲಕ್ಷ್ಮಣ್ ಸವದಿ ಗಳಗಳನೆ ಅತ್ತು ಕಣ್ಣಿರು ಹಾಕಿದರೂ.
ಪಕ್ಷದ ಮೇಲೆ ನನ್ನಗೆ ಯಾವುದೇ ದ್ವೇಷ ಇಲ್ಲಾ ನರೇಂದ್ರ ಮೋದಿ ಅತ್ಯುತ್ತಮ ನಾಯಕ ಆದರೆ ಲಕ್ಷ್ಮಣ್ ಸವದಿ ಕೆಲಸಕ್ಕೆ ಬಾರದ ವ್ಯಕ್ತಿ ಎಂದು ತಿಳಿಸಿದ್ದಾರೆ ಅವರ ಭಾವನೆಗಳಿಗೆ ನಾನು ತಲೆ ಬಾಗಿಸುತ್ತುನೆ ಬಿಜೆಪಿ ವರಿಷ್ಠರಿಗೆ ನಾನು ಕಿವಿ ಮಾತು ಹೇಳುತ್ತೇನೆ.
ಕೋಣೆ ಬಾರಿಗೆ ಇನ್ನೂಂದು ಸಾರಿ ಪರಿಶೀಲನೆ ಮಾಡಿ ಮನೆಯಿಂದ ನನ್ನ ಹೊರಗಡೆ ಹಾಕಬೇಡಿ ರಾಜಕೀಯ ಗುರುಗಳಾದ ಅನಂತಕುಮಾರ್ ಹೆಗಡೆ ಇಲ್ಲ ಮಾದ್ಯಮ ಮುಖಾಂತರ ನನ್ನ ರಾಜಕೀಯ ಗುರುಗಳಿಗೆ ಕ್ಷಮೆ ಕೇಳುತ್ತೇನೆ ನನ್ನ ಮನದಲ್ಲಿ ಹಾಗೂ ಹೆಸರು ಹೇಳದ ರಾಜಕೀಯ ಗುರುವಿಗೆ ಕೋಣೆ ನನ್ನ ಕ್ಷಮೆ ಎಂದು ಸವದಿ ಅಳುತ್ತಾ ಭಾಷಣ ಮುಗಿಸಿದರು.