ಬೆಳಗಾವಿ:ಮೀಸಲಾತಿಗೆ ಪಂಚಮಸಾಲಿ ಸಮುದಾಯ ಗಡುವು ನೀಡಿರೊ ವಿಚಾರದಲ್ಲಿ ಸಿಎಂ ಬಹಳ ಚಾಣಾಕ್ಷರು ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದಲ್ಲಿ ಒಳಪಂಗಡಗಳು ಇವೆ ಉಪ ಪಂಗಡಗಳು ಇವೆ ಅವರಿಗೂ ಕೂಡ ಮೀಸಲಾತಿ ನೀಡಲಿ ಎಂದು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರ ಮಾತನಾಡಿದ ಶಾಸಕ ರೇಣುಕಾಚಾರ್ಯ ಸಿಎಂ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಎರಡೆರಡು ಖಾತೆ ಹೊಂದಿರುವರ್ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.
ಈ ಹಿಂದೆ ಕೇಂದ್ರದ ನಾಯಕರು ಮತ್ತು ಸಿಎಂ ಮುಂದೆನೂ ಹೇಳಿದ್ವಿ ಒಬ್ಬೊಬ್ರು ಎರಡು ಖಾತೆ ನಿರ್ವಹಿಸುತ್ತಿದ್ದಾರೆ ಒಂದು ವರ್ಷದಿಂದ ಖಾಲಿ ಇದೆ ,ಎರಡೆರಡು ಖಾತೆಗಳನ್ನ ಹೊಂದಿದ್ದಾರೆ
ಹೊಸ ಮುಖಗಳಿಗೆ ಅವಕಾಶ ಕೊಡಬೇಕಿತ್ತು ಎಂದು ಗುಡುಗಿದ್ದಾರೆ.
ಈಗ ವಿಳಂಬ ಆಯ್ತು!
ಬೇರೆ ಅವರಿಗೆ ಅರ್ಹತೆ ಇಲ್ವಾ..?
ಹೊಸ ಮುಖಗಳಿಲ್ವಾ..?
ಹೊಸಬರಿಗೆ ನೀಡಿದ್ರೆ ಸಂಘಟನೆ ಬಲಿಷ್ಟ ವಾಗುತ್ತೆ ಎಂದು ಹೇಳಿದ್ದಾರೆ.