ಕೃಷ್ಣೆಯ ಮಡಿಲಲ್ಲಿ ಘನತ್ಯಾಜ್ಯ ವಿಲೇವಾರಿ ! ವಿಕೃತಿ ಮೆರೆದ ಪಂಚಾಯತ ಸಿಬ್ಬಂದಿ

  • shivaraj B
  • 4 Aug 2024 , 2:04 PM
  • Chikodi
  • 611

ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಉಕ್ಕಿಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ದರೂರ ಗ್ರಾಮಪಂಚಾಯತಿ ಸಿಬ್ಬಂದಿ ಕಸ ವಿಲೇವಾರಿ ಮಾಡಿ ವಿಕೃತಿ ಮೆರೆದಿದ್ದಾರೆ. 

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮ ಪಂಚಾಯತಿಯವರು ದರೂರ- ಹಲ್ಯಾಳ ಸೇತುವೆ ಬಳಿ ಕಸ ವಿಲೇವಾರಿ ಮಾಡಿದ್ದು, ಇದರಿಂದ ಜಲಚರ ಪ್ರಾಣಿಗಳ ಜೀವಕ್ಕೆ ಕುತ್ತು ಬಂದಿದೆ.

ಒಂದೆಡೆ ಜನತೆ ನದಿಗೆ ಬಾಗಿನ ಅರ್ಪಿಸುತ್ತಿದ್ದರೆ ಮತ್ತೊಂದೆಡೆ ದರೂರ ಪಂಚಾಯತಿಯಿಂದ  ಊರಲ್ಲಿರೋ ಕಸ ತಂದು ಕೃಷ್ಣೆಗೆ ಎಸೆಯುತ್ತಿರುವ ಗ್ರಾಮ ಪಂಚಾಯತಿಯ ಕಾರ್ಯಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ.

Read All News