ಶಿವಮೊಗ್ಗ : ಬಿಜೆಪಿಯ ಶಿವಮೊಗ್ಗ ಘಟಕವು ನಗರದಲ್ಲಿ ಆಯೋಜಿಸಿದ್ದ ತಮಿಳು ಜನರ ಸಮಾವೇಶದಲ್ಲಿ ಬಿಜೆಪಿಯ ತಮಿಳುನಾಡು ಘಟಕದ ಮುಖ್ಯಸ್ಥ ಮತ್ತು ಕರ್ನಾಟಕದ ಪಕ್ಷದ ವ್ಯವಹಾರಗಳ ಸಹ ಉಸ್ತುವಾರಿ ಕೆ. ಅಣ್ಣಾಮಲೈ ವೇದಿಕೆಯಲ್ಲಿದ್ದರು.
ಕಾರ್ಯಕ್ರಮ ಪ್ರಾರಂಭವಾದಾಗ, ಬಿಜೆಪಿಯ ಪದಾಧಿಕಾರಿಯೊಬ್ಬರು ತಮಿಳುನಾಡು ರಾಜ್ಯ ಹಾಡನ್ನು ಆವಾಹನೆಯಾಗಿ ನುಡಿಸಲಾಗುವುದು ಎಂದು ಘೋಷಿಸಿ ತಮಿಳು ನಾಡಗೀತೆಯನ್ನು ಕಾರ್ಯಕ್ರಮದಲ್ಲಿ ಹಾಡಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ ಆಗಿದ್ದು ರಾಜ್ಯ ಬಿಜೆಪಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕುವೆಂಪು ಹುಟ್ಟಿದ ನಾಡಿನಲ್ಲಿ ಇಂತಹ ನಾಡದ್ರೋಹಿ ಕೃತ್ಯ ಎಸಗಿದ ಬಿಜೆಪಿ ಪಕ್ಷವನ್ನು ಶಿವಮೊಗ್ಗದ ಸ್ವಾಭಿಮಾನಿ ಕನ್ನಡಿಗರು ತಿರಸ್ಕರಿಸಲೇಬೇಕು.#SaveNandini#saynotonationalpartiespic.twitter.com/egpqUKeGwf
— ರಾಷ್ಟ್ರೀಯ ಪಕ್ಷಗಳ ಮುಕ್ತ ಕರ್ನಾಟಕ (@NotoNatParties) April 27, 2023