ಬೆಳಗಾವಿ: ರಾಜ್ಯದ ಗ್ಯಾರಂಟಿ ಸರಕಾರ ಎಟಿಎಂ ಆಗಿ ಬದಲಾವಣೆಯಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜೀರಲಿ ವಾಗ್ದಾಳಿ ನಡೆಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ನೂರಾರು ಕೋಟಿ ರೂ. ವನ್ನು ಲೋಕಾಯುಕ್ತರು ವಶಪಡಿಸಿಕೊಂಡಿದೆ. ಇದು ಎಟಿಎಂ ಸರಕಾರ ಆಗುವುದು ಬೇಡ. ರಾಜ್ಯದ ಕಾಂಗ್ರೆಸ್ ನಲ್ಲಿ ಬಣಗಳ ರಾಜಕೀಯ ಜೋರಾಗಿದೆ. ಜನರ ಹಿತ ಅವರಿಗೆ ಬೇಕಿಲ್ಲ ಎಂದು ಹರಿಹಾಯ್ದರು.