ಬೈಲಹೊಂಗಲ : ಈ ಭಾಗದ ಜನರ ಜೀವನಾಡಿ ಮಲಪ್ರಭಾ ನದಿಯು ತನ್ನ ಒಡಲನ್ನು ತುಂಬಿಕೊಳ್ಳುತ್ತಿದ್ದು, ಎಲ್ಲರಲ್ಲಿ ಸಂತಸ ಮನೆ ಮಾಡಿದೆ.
ಕಳೆದ ನಾಲ್ಕಾರು ದಿನಗಳಿಂದ ಖಾನಾಪುರ, ಜಾಂಬೋಟಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಮಲಪ್ರಭಾ ನದಿ ತುಂಬಿಕೊಳ್ಳುತ್ತಿದ್ದು, ತಾಲೂಕಿನ ನಯಾನಗರ ಗ್ರಾಮದ ಬಳಿ ಇರುವ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಭಾಗದ ಜನರ ಜೀನನಾಡಿಯಾಗಿರುವ ಮಲಪ್ರಭಾ ನದಿಯು ತುಂಬಿ ಹರಿಯುತ್ತಿದ್ದು ಎಲ್ಲರಲ್ಲಿ ಹರ್ಷ ತಂದಿದೆ.
ವರದಿ : ರವಿಕಿರಣ್ ಯಾತಗೇರಿ