ಬೆಂಗಳೂರು : ಮೆಟ್ರೋದಲ್ಲಿ ಚಲಿಸುತ್ತಿದ್ದ ವ್ಯಕ್ತಿ ಮೆಟ್ರೋ ರೈಲಿನಲ್ಲಿನ ಹಿಂದಿ ಸ್ಟಿಕರ್ ಮೇಲಿನ ಹೊದಕೆ ತೆಗೆದು ಹಿಂದಿ ಹೇರಿಕೆ ಸಮರ್ಥನೆ ಮಾಡಿದ್ದ ಮತ್ತು "ದಿ ಬಾಯ್ಸ್ " ಎಂದು ರೀಲ್ಸ ಕೂಡಾ ಮಾಡಿ ಹವಾ ಹಬ್ಬಿಸಿದ್ದ ವ್ಯಕ್ತಿಗೆ ಕನ್ನಡ ಪರ ಹೋರಾಟಗಾರರು ಸರಿಯಾಗಿ ಬುದ್ದಿ ಮಾತು ಹೇಳಿದ್ದಾರೆ.
ನೆನ್ನೆ ಮೆಟ್ರೋ ರೈಲಿನಲ್ಲಿ ಹಿಂದಿ ಸ್ಟಿಕರ್ ತೆಗೆದು ಹಿಂದಿ ಹೇರಿಕೆ ಸಮರ್ಥನೆ ಮಾಡಿದ್ದ ಅಕ್ಷತ್ ಗುಪ್ತಾ ಅನ್ನೋ ವ್ಯಕ್ತಿಯ ಕಂಪನಿಗೆ ಇಂದು ಭೇಟಿ ಕೊಟ್ಟು ಕನ್ನಡಿಗರು ಹಿಂದಿ ಹೇರಿಕೆ ಸಹಿಸೋಲ್ಲ ಅನ್ನೋದನ್ನ ಮನವರಿಕೆ ಮಾಡಲಾಗಿ ಆತ ಕ್ಷಮೆ ಕೇಳಿದ್ದಾನೆ..ಹಿಂದಿ ಹೇರಿಕೆ ಬಗ್ಗೆ ಇಡೀ ಕಂಪನಿ ಉದ್ಯೋಗಿಗಳಿಗೆ ಮನವರಿಕೆ ಮಾಡಿದೆವು.#ದ್ವಿಭಾಷಾನೀತಿpic.twitter.com/gpvZB24lH1
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) January 30, 2023