ರಾಮದುರ್ಗ : ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಮುಂದುವರೆದ ನಿರಂತರ ಮಳೆ ಹಿನ್ನೆಲೆಯಲ್ಲಿ ಮಲಪ್ರಭಾ ನದಿಯ ಪಾತ್ರದ ಜನರಿಗೆ ಪ್ರವಾಹದ ಆತಂಕ ಶುರುವಾಗಿದ್ದು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತುರುನೂರು ಗ್ರಾಮದ ಶಾಲೆಗೆ ಮಲಪ್ರಭಾ ನದಿಯ ನುಗ್ಗಿದೆ.
ಪಶ್ಚಿಮ ಘಟ್ಟದಲ್ಲಿ ಬಾರಿ ಮಳೆಯಿಂದಾಗಿ ತನ್ನ ತಟಬಿಟ್ಟು ಮೈದುಂಬಿ ಹರಿಯುತ್ತಿರುವ ಮಲಪ್ರಭಾ ನದಿಯ ಕಾರಣದಿಂದ ನದಿಪಾತ್ರದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ರಾಮದುರ್ಗ ಪಟ್ಟಣದ ಬಾಣಕಾರ ಪೇಟೆ, ನಿಂಗಾಪೂರ ಪೇಟೆಯ ಹಲವು ಮನೆಗಳಿಗೂ ಕೂಡಾ ನೀರು ನುಗ್ಗಿದೆ.