ಬೆಳಗಾವಿ :ಪಂಚಮಸಾಲಿಗಳ ಒಡಲಿನ ದ್ವನಿ ಸರ್ಕಾರಕ್ಕೆ ಮುಟ್ಟಿದೆ,ಸಿಎಂ ಒಂದು ವಾರಗಳ ಗಡುವು ಕೇಳಿದ್ರು.
ಲಿಂಗಾಯತ ಪಂಚಮಸಾಲಿಗಳಿಗೆ ಇವತ್ರು ಪ್ರಮುಖ ದಿನ.
ಮಾದ್ಯಮಗಳಲ್ಲಿ ನೋಡಿದ್ದೇನೆ ಮೀಸಲಾತಿಗೆ ವಿಘ್ನ ಉಂಟಾಗಿದೆ ಎಂಬ ವರದಿಗಳು ಬರ್ತಿವೆ.
ಕೆಲವರೂ ಕಾನೂನು ಹೋರಾಟಕ್ಕಿಳಿದ್ದಾರೆ ಎನ್ನಲಾಗ್ತಿದೆ.
ನಮಗೂ ಅವರಿಗೂ ಸಂಬಂಧವಿಲ್ಲ.
ನಮ್ಮ ಜೊತೆಯಲ್ಲಿ ಸಮಾಜದ ಜನತೆ ಭಗವಂತ ರೂಪದಲ್ಲಿ ಇದ್ದಾನೆ ಎಂದಿದ್ದಾರೆ.
ಸಚಿವ ಸಂಪುಟದ ಬಗ್ಗೆ ನೋಡಿಕೊಂಡು ಮುಂದಿನ ಹೋರಾಟದ ಬಗ್ಗೆ ತಿರ್ಮಾನ ಮಾಡ್ತೇವೆ.
ಸಂಜೆ ಐದು ಗಂಟೆಯವರೆಗೆ ಸಂಯಮದಿಂದ ಕಾಯ್ತೇವೆ.
ಸಿಎಂಗಳ ಮೇಲೆ ನಂಬಿಕೆಯಿಂದಾಗಿ ಒಂದು ವಾರಗಳ ಗಡುವು ನೀಡಲಾಗಿದೆ.
ಯಾರೇ ಏನೇ ಮಾಡಲಿ ಅವರನ್ನು ನಾವು ಪ್ರಶ್ನೆ ಮಾಡಲ್ಲ.
2A ಮೀಸಲಾತಿಯಲ್ಲಿರುವ ಸಮುದಾಯಗಳಿಗೆ ಅನ್ಯಾಯವಾಗದಂತೆ ನಮಗೆ ಮೀಸಲಾತಿ ನೀಡಿ.
ನಮ್ಮ ಗುರಿ ನಮ್ಮ ಮಕ್ಳಲ ಶಿಕ್ಷಣ ಉದ್ಯೋಗಕ್ಕಾಗಿ ಮೀಸಲಾತಿ ಬೇಕು ,ಸಂಜೆಯವರೆಗೂ ಕಾಯುತ್ತೇವೆ.
ಸಮಾಜ ಬಾಂಧವರು ಬೀದಿಗೆ ಬಂದು ಕಾನೂನು ಹೋರಾಟ ಮಾಡಬೇಡಿ.
ಸರ್ಕಾರ ಮೀಸಲಾತಿ ಮಾಡದಿದ್ದರೆ ಮುಂದಿನ ಹಾದಿ ಕುರಿತಂತೆ ಎರಡು ಸಲ ಮಾತುಕತೆ ಮಾಡಿದ್ದೇವೆ.
ನಿನ್ನೆ ಸಂಜೆ ಸಮಾಜದ ಮುಖಂಡರು ಸಭೆ ಮಾಡಿದ್ದೇವೆ
ಸಕಾರಾತ್ಮಕವಾಗಿದ್ದೇವೆ.
ಸಂಜೆ ಐದು ಗಂಟೆಗೆ ಏನು ನಿರ್ಣಯ ಆಗುತ್ತೆ ಅನ್ನೋದನ್ನ ಕಾದು ನೋಡ್ತೇವೆ ಎಂದು ಹೇಳಿದ್ದಾರೆ.