ಸುಳೆಭಾವಿಯಲ್ಲಿ ಜೋಡಿ ಕೊಲೆಗೆ ಬೆಚ್ಚಿ ಬಿದ್ದ ಗ್ರಾಮಸ್ಥರು

  • 11 Jan 2024 , 2:03 PM
  • Belagavi
  • 491

ಬೆಳಗಾವಿ: ಹಳೆಯ ವೈಷಮ್ಯ ಹಿನ್ನಲೆ ಎರಡು ಗುಂಪುಗಳ ನಡುವೆ ಮಾರಾಮಾರಿ‌‌ ನಡದು ಇಬ್ಬರು ಯುವಕರ‌ನ್ನು ಕಾರದ ಪುಡಿ ಎರಚಿ ಕೊಲೆ ಮಾಡಿದ ಘಟನೆ ಸುಳೆಭಾವಿಯಲ್ಲಿ ನಡೆದಿದೆ.

ಗುರುವಾರ ತಡರಾತ್ರಿ ಸುಳೇಭಾವಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಸುಳೇಭಾವಿ ಗ್ರಾಮದ ಪ್ರಕಾಶ್ ಹುಂಕ್ರಿಪಾಟೀಲ್(22),ಮಹೇಶ್ ಮುರಾರಿ(28) ಕೊಲೆಯಾದ ಯುವಕರು ಎಂದು‌ ಗುರುತಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದ ಸುಳೆಭಾವಿಯಲ್ಲಿ ಒಂದು ಕೆಎಸ್ ಆರ್ ಪಿ ವಾಹನ ಸೇರಿದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ.

Read All News