ಜತ್ ನಲ್ಲಿ ಬೋಮ್ಮಾಯಿಯವರಿಗೆ ದಕ್ಷಿಣ ಪಥೇಶ್ವರ ಬಿರುದು ನೀಡಲಿದ್ದೇವೆ: ಭೀಮಾಶಂಕರ

  • 14 Jan 2024 , 10:40 PM
  • Belagavi
  • 192

ಬೆಳಗಾವಿ :ಮಹಾರಾಷ್ಟ್ರದ ಗಡಿ ಕನ್ನಡಿಗರಿಗೆ ಅನ್ಯಾಯ ಆಗ್ತಿದೆ. ಬಸವರಾಜ ಬೋಮ್ಮಾಯಿ ಅವರನ್ನ ಮಹಾರಾಷ್ಟ್ರ ದ ಜತ್ ತಾಲೂಕಿಗೆ ಆಹ್ವಾನ ಮಾಡ್ತಿವಿ. ಜತ್ ನಲ್ಲಿ ಬೋಮ್ಮಾಯಿ ಅವರಿಗೆ ದಕ್ಷಿಣ ಪಥೇಶ್ವರ ಅಂತಾ ಬಿರುದು ನೀಡಿ ಗೌರವಿಸುತ್ತೇವೆ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು.

ಮಿಲನ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಈ ಪ್ರಶಸ್ತಿ ಕೊಡ್ತಿವಿ. ಈಗಾಗಲೇ ಸಿಎಂ ಕಚೇರಿ ಜೊತೆಗೆ ಪತ್ರ ಸಂಪರ್ಕ ಮಾಡಿದ್ದೇವೆ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಗಡಿ ವಿವಾದ ಅರ್ಜಿ ವಿಚಾರಣೆ ಗೆ ಬರಲಿದೆ. ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಏನಾಗುತ್ತದೆ ಎಂಬ ಆತಂಕ ನಮ್ಮಲ್ಲಿ ಇದೇ. ಗಡಿ ಭಾಗವನ್ನ ಅಭಿವೃದ್ಧಿ, ಗಡಿ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಸರ್ಕಾರದ ವಿವಿಧ ಇಲಾಖೆಯಿಂದ ಆಗಿಲ್ಲ. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾಳೆ ಏನಾದರೂ ಸುಪ್ರೀಂ ಕೋರ್ಟ್ ನಲ್ಲಿ ವ್ಯತಿರಿಕ್ತವಾದ ತೀರ್ಮಾನ ಬಂದ್ರೆ. ಆಗೋ ಅನಾಹುತ ಕ್ಕೆ ಸರ್ಕಾರ ಹೊಣೆಯಾಗಲಿದೆ. ಎಂಇಎಸ ಅವರಿಗೆ ಒದ್ದು ಬೆಳಗಾವಿಯಿಂದ ಹೊರಗೆ ಹಾಕಬೇಕು. ಹೆತ್ತ ತಾಯಿಗೆ ಲಾಡಿ ಬಿಚ್ಚುವ ಕೆಲಸವನ್ನ ನಮ್ಮ ಜನಪ್ರತಿಧಿನಿಗಳು ಮಾಡಬಾರದು. ಬೆಳಗಾವಿಯಲ್ಲಿ ಇರುವ ರೋಹಿಂಗ್ಯಾಗಳಿಗೆ ಹೊರಹಾಕಬೇಕು. ಮಹಾರಾಷ್ಟ್ರ ದ ಇಬ್ಬರು ಗಡಿ ಸಚಿವರು ಬೆಳಗಾವಿ ಬರುವುದಾಗಿ ಹೇಳಿದ್ದಾರೆ.
ಡಿಸೆಂಬರ್ 3 ರಂದು ಬೆಳಗಾವಿ ಗೆ ಬರ್ತಿವಿ ಅಂತಾ ಮಹಾ ಸಚಿವರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ಕೊಡಬೇಡಿ. ಒಂದು ವೇಳೆ ಎಂಇಎಸ ಅಧಿವೇಶನ ಸಂದರ್ಭದಲ್ಲಿ ಮಹಾಮೇಳಾವ ಮಾಡಲು ಮುಂದಾಗಿದ್ದಾರೆ. ಎಂಇಎಸ ಮಹಾಮೇಳಾವಗೆ ಅವಕಾಶ ನೀಡಬಾರದು. ನಾವು ಕೂಡಾ ಒನಕೆ ಚಳುವಳಿ ಮಾಡ್ತಿವಿ ಎಂದ ಭೀಮಾಶಂಕರ ಪಾಟೀಲ್ ಹೇಳಿದರು.

ಸುಪ್ರೀಂಕೋರ್ಟ್ ನಲ್ಲಿ ಗಡಿ ವಿವಾದ ವಿಚಾರದಲ್ಲಿ ಮಹಾಜನ್ ವರದಿ ಬಿಟ್ಟರೆ ಬೇರೆಯಾವುದೇ ದಾಖಲೆಗಳು ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Read All News