ಕಾಗವಾಡ: ಮಾಜಿ ಸಿಎಂ ಜಗದೀಶ ಸೆಟ್ಟರ್ ಬಿಜೆಪಿ ಪ್ರವೇಶ ಬೆನ್ನಲ್ಲೆ ರಾಜಕೀಯದಲ್ಲಿ ಹಲವು ಉಹಾ ಪೋಹಗಳು ಸೃಷ್ಟಿಯಾಗಿವೆ ನನ್ನ ಆಪ್ತ ಸ್ನೇಹಿತ ಲಕ್ಷ್ಮಣ ಸವದಿ ಹಾಗೂ ನಾನು ಯಾವುದೆ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.
ಅವರು ಕಾಗವಾಡ ತಾಲೂಕಿನ ಉಗಾರ ಖುರ್ದ್ ಪಟ್ಟಣದಲ್ಲಿ ಸ್ವ ಕಚೇರಿಯಲ್ಲಿ ಶಾಸಕ ರಾಜು ಕಾಗೆ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿತ್ತಾ.ಬೆಳಗಾವಿಯ ಜಿಲ್ಲಾ ಮದ್ಯವರ್ತಿ ಬ್ಯಾಂಕ್ ಸಭೆಯಲ್ಲಿ ಬಿಜೆಪಿ ಕಾಂಗ್ರೆಸ್ ನಾಯಕರು ಒಟ್ಟಾಗಿ ಬಂದಿದ್ದಾರೆ ಆದ್ರೆ ಸವದಿ ಬಿಜೆಪಿಗೆ ಹೋಗುವುದು ಉಹಾ ಪೋಹವಷ್ಟೇ ಜಗದೀಶ ಶೆಟ್ಟರ್ ನಮ್ಮ ಮನೆಗೆ ಊಟಕ್ಕೆ ಬಂದರೆ ನಾನು ನಾನು ಬಿಜೆಪಿಗೆ ಸೇರ್ತೀನಿ ಅಂತಾ ಅರ್ಥನಾ? ನಾನು ಲಕ್ಷಣ ಸವದಿ ಬಿಜೆಪಿ ಪಕ್ಷಕ್ಕೆ ಪಕ್ಷಾಂತರವಾಗುವುದು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆ ನೀಡಿದರು.
ವರದಿ : ರಾಹುಲ್