ಅಥಣಿ :ಮಾಜಿ ಡಿಸಿಎಂ ಸರಕಾರದ ಶಕ್ತಿ ಕೇಂದ್ರ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಅಥಣಿ ತಾಲೂಕಿನ ಮಿನಿ ವಿಧಾನಸೌಧ ರಸ್ತೆಗೆ ಇಲ್ಲಿಯವರೆಗೂ ಅಭಿವೃದ್ಧಿ ಮಾಡಲು ಮುಂದಾಗದೆ ಇರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕಿಕೊಂಡು ಸಂಚಾರ ನಡೆಸುವಂತಾಗಿದೆ.
ಅಥಣಿ- ವಿಜಯಪುರ ರಾಜ್ಯ ಹೆದ್ದಾರಿ ದುಸ್ಥಿತಿ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣ ಪ್ರಭಾವಿ ರಾಜಕಾರಣಿ ಗಳ ತವರೂರಾಗಿದೆ. ಬಿಜೆಪಿ ಶಾಸಕ ಮಹೇಶ ಕುಮಠಳ್ಳಿ ಕ್ಷೇತ್ರದಲ್ಲೇ ರಸ್ತೆಯ ದುಸ್ಥಿತಿ. ಪಟ್ಟಣದಿಂದ ಎರಡು ಕೀ ಮೀ ರಸ್ತೆ ಹದಗೆಟ್ಟಿದ್ದರಿಂದ ಸಾಕಷ್ಟು ಬಾರಿ ಅಪಘಾತವಾಗಿವೆ.ತಹಸೀಲ್ದಾರ್ ಕಛೇರಿ ಇರುವುದರಿಂದ ತಾಲೂಕಿನ ಹಳ್ಳಿ ರೈತರಿಗೂ ರಸ್ತೆ ಗುಂಡಿಯಿಂದ ಸಾಕಷ್ಟು ಸಂಕಷ್ಟ ಎದುರಾಗಿದೆ.